ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಬಗ್ಗೆ ಕುರಿತು ಚರ್ಚಿಸಿದ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ…!!!

Listen to this article

ದಿ. 27-06-24 ರಂದು “ಸರ್ಕಾರಿ ಭರವಸೆಗಳ ಸಮಿತಿ” ಸಭೆಯಲ್ಲಿ ಶಾಸಕರಾದ
ಡಾ. ಶ್ರೀನಿವಾಸ್ ಎನ್. ಟಿ.ರವರು ಭಾಗವಹಿಸಿ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕುರಿತು ಚರ್ಚಿಸಿದ ವಿಚಾರಗಳು
ರಾಜ್ಯದಲ್ಲಿ ಪಡಿತರ ಚೀಟಿ ನಿಯಮಿತವಾಗಿ ವಿತರಣೆ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಕ್ರಮ.
ಪಡಿತರ ಚೀಟಿಯಲ್ಲಿ ಅಕ್ಕಿಯೊಂದಿಗೆ ಆಯಾ ಭಾಗದ ಪಡಿತರ ಧಾನ್ಯಗಳಾದ ರಾಗಿ , ಜೋಳ, ಸಕ್ಕರೆ, ತೊಗರಿಯನ್ನು ರಿಯಾಯಿತಿ ದರದಲ್ಲಿ ನೀಡಲು ಕ್ರಮ ಕೈಗೊಳ್ಳಲು ಚರ್ಚಿಸಿದರು.


ವಿಶೇಷವಾಗಿ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ವೇಳೆ ಪಡಿತರ ಚೀಟಿ ತಿದ್ದುಪಡಿಗಾಗಿ ಅವಕಾಶ ಕಲ್ಪಿಸಿಕೊಡುವುದಾಗಿ ಅಧಿಕಾರಿಗಳು ಶಾಸಕರಿಗೆ ತಿಳಿಸಿದರು.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್‌. ಟಿ‌. ಅವರು 1000 ಕ್ಕಿಂತ ಹೆಚ್ಚು ಪಡಿಚತರ ಚೀಟಿ ತಿದ್ದುಪಡಿ, ಸೇರ್ಪಡೆಯ ಹಾಗೂ ಇಲಾಖೆಗೆ ಸಂಬಂಧಿಸಿದಂತಹ ರಾಜ್ಯಾದ್ಯಂತ ಇರುವ ಅನೇಕ ಸಮಸ್ಯೆಗಳನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಚನ್ನಾರೆಡ್ಡಿ ಪಾಟೀಲ ತನ್ನೂರ, ಉಪಾಧ್ಯಕ್ಷರಾದ ಶಾಮನೂರು ಶಿವಶಂಕಪರಪ್ಪ, ಶಾಸಕರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend