ಅಂಬೇಡ್ಕರ್ ಅವರು ಕೊಟ್ಟ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾವು ಸಾಗೋಣ. ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕ್ರಿಕೇಟರ್ಸ್ ವತಿಯಿಂದ ಟೆನ್ನಿಸ್ ಬಾಲ್ ಟೂರ್ನಿಮೆಂಟ್ ಅನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ದಿ.22-06-24 ರಂದು ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಕೊಟ್ಟ ಸಾಮಾಜಿಕ ನ್ಯಾಯ ಅಡಿಯಲ್ಲಿ ಶಾಸಕನಾಗಿದ್ದೇನೆ. ನೀವು ಎಲ್ಲರೂ ಒಗ್ಗಟ್ಟಿನಿಂದ ಇಲ್ಲಿ ಕ್ರೀಡೆಗಾಗಿ ಸೇರಿರುವುದು ಖುಷಿ ಇದೆ. ನಮ್ಮಲ್ಲಿ ಯಾವುದೇ ಭೇದ -ಭಾವ ಮಾಡದೇ ಶೋಷಿತರ ಪರ ದುಡಿಯುತ್ತೇನೆ. ಯುವಕರು ಮೌಢ್ಯತೆಯಿಂದ ಹೊರಬಂದು ಉನ್ನತ ಶಿಕ್ಷಣ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದೂ ಕಿವಿ ಮಾತು ಹೇಳಿದರು. ನಾನು ಹೆಚ್ಚಾಗಿ ಮಾತನಾಡುವುದಿಲ್ಲಾ. ತಮ್ಮ ಬೇಡಿಕೆಗಳನ್ನು ಪೂರೈಸಲು ಕೆಲಸ ಮಾಡುತ್ತೇನೆ. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಪ್ರಭಾಕರ , ಶ್ರೀ ದುರಗೇಶ, ಶ್ರೀ ಕಾವಲಿ ಶಿವಪ್ಪನಾಯಕ, ಅಂಬೇಡ್ಕರ್ ನಗರದ ಹಿರಿಯರು, ಕ್ರೀಡಾಪಟುಗಳು, ಯುವಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030