ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ ಡಾ. ಶ್ರೀನಿವಾಸ್. ಎನ್‌. ಟಿ…!!!

Listen to this article

ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟನೆ ; ಗ್ರಂಥಾಲಯಗಳು ಸ್ವಾಭಿಮಾನದ ಬದುಕನ್ನು ರೂಪಿಸುವ ಸಾಮರ್ಥ್ಯ ಹೊಂದಿವೆ – ಶಾಸಕ ಡಾ. ಶ್ರೀನಿವಾಸ್. ಎನ್‌. ಟಿ.

ಕೂಡ್ಲಿಗಿ ಪಟ್ಟಣದ ಬಾಪೂಜಿ ನಗರದಲ್ಲಿ ಹೊಸದಾಗಿ ನಿರ್ಮಿಸಿದ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ. 25 -06-24 ರಂದು ಉದ್ಘಾಟಿಸಿ ಮಾತನಾಡಿದರು. ಆಧುನಿಕತೆಯಲ್ಲಿ ವಿದ್ಯಾರ್ಥಿಗಳು ಅಂತರ್ಜಾಲದ ಮೊರೆಹೋಗಿ ಜಾಹಿರಾತು ನೋಡಿ ಸಮಯ ದುಂದುವೆಚ್ಚ ಮಾಡದೇ ಪುಸ್ತಕಗಳ ಅವಲಂಬಿಸಿ ಜ್ಞಾನದ ಮೊರೆಹೋದಾಗ ಮಾತ್ರ ಸ್ವಾಭಿಮಾನದ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದೂ ಹೇಳಿದರು. ಸರ್ಕಾರದಿಂದ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ಶ್ರಮವಹಿಸಿ ಗುಣಮಟ್ಟದ ಸುಸಜ್ಜಿತವಾದ ಗ್ರಂಥಾಲಯ ಕಟ್ಟಡವನ್ನು ನಮ್ಮ ಕೂಡ್ಲಿಗಿ ಪಟ್ಟಣದಲ್ಲಿ ನಿರ್ಮಿಸಿರುವಂತದ್ದೂ, ಸಾಮಾಜಿಕ ಸುಧಾರಣೆ ತರುವ ನಿಟ್ಟಿನಲ್ಲಿ ಮಹತ್ತರವಾದದ್ದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಪಾಲಕರಾದ ಲಕ್ಷ್ಮೀ ಕಿರಣ, ತಾಲೂಕು ಗ್ರಂಥಪಾಲಕರು ಹೆಚ್. ಸುರೇಶ, ಸಹ ಗ್ರಂಥ ಪಾಲಕರು ಎಸ್. ಟಿ. ಪ್ರಭಾಕರ್, ಇತರ ಸಿಬ್ಬಂದಿ ವರ್ಗ , ಪಟ್ಟಣ ಪಂಚಾಯತ ಸದಸ್ಯರಾದ ಲೀಲಾವತಿ ಪ್ರಭಾಕರ್, ಕಾವಲಿ ಶಿವಪ್ಪನಾಯಕ, ಕಂಪ್ಯೂಟರ್ ರಾಘವೇಂದ್ರ, ಕ್ಷೇತ್ರದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend