ಮಾಜಿ ಶಾಸಕರು ದಿ. ಎನ್. ಟಿ. ಬೊಮ್ಮಣ್ಣ ಹಾಗೂ ದಿ. ವೀರಭದ್ರಪ್ಪ ನವರ ಸ್ಮರಣಾರ್ಥ ಕ್ರೀಕೆಟ್ ಟೂರ್ನಿಗೆ ಚಾಲನೆ ನೀಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
“ಯುವಕರು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಹೆಸರು ತರಬೇಕು.”
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣ, ಮಾಜಿ ಜಿ. ಪಂ. ಸದಸ್ಯರಾದ ದಿ. ವೀರಭದ್ರಪ್ಪನವರ ಸ್ಮರಣಾರ್ಥ ದಿ. 25 -06-24 ರ ರಂದು ನರಸಿಂಹಗಿರಿ ಗ್ರಾಮದಲ್ಲಿ “ ಸಿಂಹಳ ಕ್ರಿಕೆಟಸ್೯ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಿ” ಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುವಕರು ಆರೋಗ್ಯಕರ ಜೀವನಕ್ಕಾಗಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು.
ಇಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಜಗಳಮಾಡಿಕೊಳ್ಳದೇ ಒಬ್ಬರಿಗೆ ಒಬ್ಬರು ಪ್ರೀತಿ, ಸ್ನೇಹದಿಂದ ಆಟವಾಡಬೇಕು. ಇಲ್ಲಿ ನೂರಾರು ತಂಡಗಳು ಭಾಗವಹಿಸುವಂತದ್ದೂ ನನ್ನಲ್ಲಿಯೂ ಸಂತಸವನ್ನುಂಟು ಮಾಡಿದೆ. ನೀವು ಕ್ರೀಡೆಯಲ್ಲಿ ಒಳ್ಳೆಯ ಪ್ರದರ್ಶನ ನೀಡಿ ದೇಶಕ್ಕೆ ಹೆಸರು ತರಬೇಕು ಎಂಬ ಸ್ಪೂರ್ತಿಯನ್ನು ತುಂಬಿ ಕ್ರೀಡಾಪಟುಗಳನ್ನು ಶಾಸಕರು ಉರಿದುಂಬಿಸಿದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಮುಖಂಡರು, ಗ್ರಾಮಸ್ಥರು, ಪತ್ರಕರ್ತರು ಉಪಸ್ಥಿತರಿದ್ದರು….
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030