ಬೆಳೆ ಸಮೀಕ್ಷೆ ಗಾರರು ಈ ದಿನ ತಹಸೀಲ್ದಾರರವರ ಮುಖಾಂತರ ಮನವಿ ಸಲ್ಲಿಸುತ್ತಾ ಕಳೆದ 06 ವರ್ಷಗಳಿಂದ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸರಿ ಸುಮಾರು ಜನ ಬೆಳೆ ಸಮೀಕ್ಷೇಗಾರರಾಗಿ ತಮ್ಮಗಳ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು,ಹಿಂಗಾರು ಋತುಗಳಲ್ಲಿ ವರ್ಷಕ್ಕೆ 2 ಬಾರಿ ರೈತರ ಜಮೀನಿಗಳಲ್ಲಿ ಬೆಳೆ ಸಮೀಕ್ಷೇ ಮಾಡುತ್ತಿದ್ದೇವೆ.
ಸರಿ ಸುಮಾರು ಜನ ಬೆಳೆ ಸಮೀಕ್ಷೇಗಾರರಾಗಿ ತಮ್ಮಗಳ ವ್ಯಾಪ್ತಿಯಲ್ಲಿ ಮುಂಗಾರು,ಹಿಂಗಾರು ಸರ್ವೇ ಮಾಡುತ್ತಿದ್ದು.ಪ್ರಸ್ತುತ ಪ್ರತಿ ಸರ್ವೆ ಸಂಖ್ಯೆಗೆ 10/-ಪ್ರೋತ್ಸಹಧನ ಪಡೆಯುತ್ತಿದ್ದೇವೆ.ಇತ್ತಿಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಕಾಲಕಾಲಕ್ಕೆ ಬದಲಾವಣೆ ಆಗುತ್ತಿದ್ದು.ಈ 10/-ರೂ ನಮ್ಮಗೆ ಸಾಕಾಕತ್ತಿಲ್ಲ ಆದ್ದರಿಂದ 10/-ರೂ.ನಿಂದ 30/-ರೂಗಳ ವರೆಗೆ.ಹೆಚ್ಚಿಸಿ ಕೊಡಬೇಕೆಂದು ಹಾಗೂ ಬೆಳೆ ಸಮೀಕ್ಷೇಗಾರರಿಗೆ ಸಮೀಕ್ಷೇಗಾಗಿ ರೈತರ ಜಮೀನುಗಳಿಗೆ ಹೋದಾಗ ನೀವು ಯಾರು? ಎಂದು ಪ್ರಶ್ನೆ ಮಾಡಿ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ ಇಲ್ಲದಿದ್ದರೆ ಜಮೀನಿ ನಿಂದ ಹೊರ ಹೊಗಿ ಎಂದು ಅವಮಾನಿಸುತ್ತಿರುವುರಿಂದ ಗುರುತಿನ ಚೀಟಿಯನ್ನು ಒದಗಿಸಿಕೊಡ ಬೇಕೆಂದು ತಹಸೀಲ್ದಾರ ರವರ ಮುಖಾಂತರ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ನಿಜಲಿಂಗಪ್ಪ ಮರಬ ಮತ್ತು ಹನುಮಂತಪ್ಪ ಹಾಗೂ ಅಗ್ನಿ .ಇಂದ್ರಜಿತು
ಮರುಳಸಿದ್ದಪ್ಪಇನ್ನು ಮುಂತಾದವರು ಕೂಡ್ಲಿಗಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಕೊಟ್ಟು ತಮ್ಮ ಬೇಡಿಕೆಗಳನ್ನು ಅತೀ ಶಿಘ್ರದಲ್ಲಿ ಬಗೆಹರಿಸಿ ಎಂದು ಆಗ್ರಹಿಸಿದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030