ಕೆ. ಎಸ್. ಆರ್. ಟಿ. ಸಿ. ಬಸ್ಸುಗಳಿಗೆ ಚಾಲನೆ ; ಸಾರಿಗೆ ವ್ಯವಸ್ಥೆಯನ್ನು ಗಡಿಗ್ರಾಮಕ್ಕೂ ಕಲ್ಪಿಸಿಕೊಡಬೇಕು. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
“ ಶಾಲಾ ದಿನಗಳಲ್ಲಿ ಕುಂಬಳಗುಂಟೆ ಬಸ್ಸನ್ನು ನೆನಪಿಸಿಕೊಂಡ ಶಾಸಕರು”
ಕೂಡ್ಲಿಗಿ ಪಟ್ಟಣದಲ್ಲಿ ದಿ.19-06-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಕೆ. ಎಸ್. ಆರ್. ಟಿ. ಸಿ. ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದರು. ಸಾರಿಗೆ ಕ್ಷೇತ್ರದ ಸುಧಾರಣೆಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ನಮ್ಮ ಕ್ಷೇತ್ರದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವೆ ಎಂದೂ ಹೇಳಿದರು. ನಮ್ಮ ತಾಲೂಕಿಗೆ ಹೊಸದಾಗಿ ಬಂದಿರುವ ಬಸ್ಸುಗಳನ್ನು ಕಟ್ಟ ಕಡೆಯ ಗಡಿಗ್ರಾಮಕ್ಕೂ ಹಾಗೂ ಮಣಿಪಾಲ್ ಆಸ್ಪತ್ರೆಯ ಆರೋಗ್ಯದ ಸೌಲಭ್ಯ ಪಡೆಯಲು ಸಾರಿಗೆ ವ್ಯವಸ್ಥೆಯನ್ನು ಮುಕ್ತವಾಗಿ ಸಿಗುವಂತೆ ಕಲ್ಪಿಸಿಕೊಡಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಸ್ಸುಗಳನ್ನು ನಮ್ಮ ಸರ್ಕಾರ ಒದಗಿಸಿಕೊಡಲಿದೆ ಎಂದೂ ತಿಳಿಸಿದರು.
ಶಾಸಕರು ಬಾಲ್ಯದಲ್ಲಿ ಶಾಲೆಗೆ ತೆರಳಿದ ಸಮಯ ಪ್ರಜ್ಞೆಯನ್ನು ನೆನಪಿಸಿಕೊಂಡರು. ನಿತ್ಯಾ ಕುಂಬಳಗುಂಟೆ ಬಸ್ಸನ್ನು ಅನುಸರಿಸಿ ಸಹಪಾಠಿಗಳ ಜೊತೆಗೆ ಶಾಲೆಗೆ ಹೋಗುತ್ತಿರುವುದನ್ನು ರೂಢಿಸಿಕೊಂಡಿದ್ದರು. ಒಂದೊಂದು ದಿನ ಕುಂಬಳಗುಂಟೆ ಬಸ್ಸು ತಡವಾಗಿ ಬಂದ್ರೇ, ಬಸ್ಸಿನಂತೆ ತಡವಾಗಿ ಶಾಲೆಗೆ ಹೋಗುವ ಪರಿಪಾಠವನ್ನು ಇಟ್ಟುಕೊಂಡಿದ್ದರು. ಶಾಲೆಗೆ ತಡವಾಗಿ ಬಂದಿದ್ದೀರಿ ಎಂಬ ಪ್ರಶ್ನೆಯನ್ನು ಮೇಷ್ಟ್ರು ಕೇಳಿದ್ದರೇ, ನಾವೇನೂ ಮಾಡೋಣ ಸರ್ ?. ಕುಂಬಳಗುಂಟೆ ಬಸ್ಸು ತಡವಾಗಿ ಬಂದಿದೆ. ಅದಕ್ಕೆ ನಾವು ಶಾಲೆಗೆ ತಡವಾಗಿ ಬಂದಿದ್ದೇವೆ ಎಂಬ ನೆಪವನ್ನು ಹೇಳಿ ಜಾರಿಕೊಂಡಿರುವ ಘಟನೆಯನ್ನು ನೆನಪಿಸಿಕೊಂಡ ಶಾಸಕರು ನೆರೆದ ಜನರನ್ನು ನಗೆ ಗಡಲಲ್ಲಿ ತೇಲಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030