ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಗ್ರಾಮದಲ್ಲಿ ಈ ದಿನ ಸುರಿದ ಭಾರಿ ಮಳೆಯಿಂದ ಹಳ್ಳ ಕೊಳ್ಳೆಗಾಳು ತುಂಬಿ ಹರಿಯುತ್ತಿದ್ದು ಜನಜೀವನ ಹಸ್ತವ್ಯಸ್ತಗೊಂಡಿತು ಗುಡೆಕೋಟೆ ರಸ್ತೆಯ ಎರಡು ಹಳ್ಳಗಳು ಕಕ್ಕುಪ್ಪಿ ಗ್ರಾಮದ ಹತ್ತಿರ ವಾಹನ ಸವಾರರಿಗೆ ತಡೆಯುಡ್ಡಿದ್ದು ಸುಮಾರು ಹೊತ್ತು ಸಾರ್ವಜನಿಕರಿಗೆ ತೊಂದರೆಯಾಗಿತ್ತು ರಸ್ತೆ ಸಾರಿಗೆಯ ಬಸ್ಸು ಮತ್ತು ದ್ವಿಚಕ್ರ ವಾಹನಗಳ ಸವಾರರು ಕೆಲವು ಗಂಟೆಗಳ ಹಳ್ಳದ ದಂಡೆಯಲ್ಲಿ ನಿಂತುಕೊಂಡು ಆತಂಕ ಸ್ಥಿತಿ ಎದುರಾಗಿತ್ತು ಸುಮಾರು ವರ್ಷಗಳಿಂದ ಇಷ್ಟೊಂದು ವರ್ಷಧಾರೆ ಸುರಿದರುವುದರಿಂದ ಅನೇಕ ಬೋರ್ವೆಲ್ ಗಳು ನಿಂತು ಹೋಗಿದ್ದ ಪರಿಣಾಮ ಈಗ ಎಲ್ಲ ಬೋರ್ವೆಲ್ಗಳು ರಿಚಾರ್ಜ್ ಆಗಿ ರೈತರ ಮೊಗದಲ್ಲಿ ಮಂದಹಾಸ ಬೇರಿದೆ ಮಳೆರಾಯ ಈ ಬಾರಿ ರೈತರಿಗೆ ಕರುಣೆ ತೋರಿದ್ದು ರೈತರಲ್ಲಿ ಅತೀವ ಸಂತೋಷವನ್ನುಂಟು ಮಾಡಿದೆ ಯಾವುದೇ ಹಾನಿ ಇನ್ನೂ ವರದಿಯಾಗಿಲ್ಲ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030