ಈ ದಿನ ದಿಬ್ಬದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಹೆಚ್. ಶರಣಪ್ಪ ಇವರು ದೈವಾಧೀನರಾದ ಪ್ರಯುಕ್ತ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನು ಜನಪ್ರಿಯ ಶಾಸಕರಾದ ಡಾ.ಏನ್. ಟಿ. ಶ್ರೀನಿವಾಸ್ ಮೂಲಕ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ನಿರ್ದೇಶಕರಾದ ಹೆಚ್. ಮರಳಿಸಿದ್ದಪ್ಪ ಇವರು ದಿಬ್ಬದಹಳ್ಳಿ ಶರಣಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮುಖಾಂತರ ಆರ್ಥಿಕ ಸಹಾಯವನ್ನು ನೀಡಿದರು ರೈತ ಕಲ್ಯಾಣ ಟ್ರಸ್ಟ್ ನಿಂದ 20 ಸಾವಿರ ಆರ್ಥಿಕ ಸಹಾಯ ನೀಡಿದರು ಶಾಸಕರು ಮಾತನಾಡಿ ಹಾಲು ಉತ್ಪಾದಕರ ಹಿತ ಕಾಪಾಡುವಲ್ಲಿ ಒಕ್ಕೂಟ ಪ್ರಮುಖ ಪಾತ್ರ ವಹಿಸುತ್ತಿದೆ ನಮ್ಮ ತಾಲೂಕಿನಲ್ಲಿ ಹೈನುಗಾರಿಕೆಗೆ ಉತ್ತಮ ಅನುಕೂಲಕರ ವಾತಾವರಣ ಹೊಂದಿದ್ದು ಪ್ರತಿಯೊಬ್ಬ ಕುಟುಂಬವು ಕೂಡ ಉಪಕಸುಬಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು ನಿರ್ದೇಶಕರಾದ ಹೆಚ್. ಮರಳಿಸಿದ್ದಪ್ಪ ಇವರು ಮಾತನಾಡಿ ಕಳೆದ ಬಾರಿ ಬರಗಾಲದಿಂದ ತತ್ತರಿಸಿದರೂ ಕೂಡ ಹೈನುಗಾರಿಕೆಯಲ್ಲಿ ತೊಡಗಿ ಕೊಂಡಿರುವ ಕುಟುಂಬಗಳು ಆರ್ಥಿಕವಾಗಿ ಅನುಕೂಲಕರವಾಗಿದ್ದವು ಎಂದು ಹೇಳಿದರು ನಮ್ಮ ತಾಲೂಕಿನಲ್ಲಿ ಮುಂದಿನ ಸಾರಿ ಒಂದು ಲಕ್ಷ ಲೀಟರ್ ಹಾಲು ಶೇಖರಣೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಒಕ್ಕೂಟದ ಅಧಿಕಾರಿಗಳಾದ ತಿಪ್ಪೇಸ್ವಾಮಿ ರಾಯಾಪುರ ಸಂಘದ ಅಧ್ಯಕ್ಷ ರಾದ ರೇವಣ್ಣ ಮಾಸ್ಟ್ರುನಿರ್ದೇಶಕರಾದ ಮಂಜುನಾಥ್ ಕಾರ್ಯದರ್ಶಿ ನಾಗೇಂದ್ರಪ್ಪ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಊರಿನ ಅನೇಕ ಮುಖಂಡರು ಕೂಡ ಹಾಜರಿದ್ದರು..
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030