ಮೂರನೇ ಬಾರಿ ಪ್ರಧಾನಿ ಗದ್ದಿಗೇರಿದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ…!!

Listen to this article

ಮೂರನೇ ಬಾರಿ ಪ್ರಧಾನಿ ಗದ್ದಿಗೇರಿದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ

ಕಾನ ಹೊಸಹಳ್ಳಿ: ಸಮೀಪದ ಎಸ್ ಇಮಡಾಪುರ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀ ಸಂಗಮೇಶ್ವರ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಶ್ರೀ ಸಂಗಮೇಶ್ವರ ಬೆಟ್ಟದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ದೇಶವನ್ನು ಎರಡು ಅವಧಿಗೆ ಸಮರ್ಥವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ದೇಶದ ಮತದಾರರು ಮೂರನೇ ಅವಧಿಗೂ ಎನ್‍ಡಿಎಗೆ ಬಹುಮತ ನೀಡಿದ್ದಾರೆ. ಈ ಭಾರಿ ದೇಶದ ಅಭಿವೃದ್ಧಿ ಸೇರಿದಂತೆ ಆರ್ಥಿಕ ಸಧೃಢತೆಯನ್ನು ಕಾಪಾಡುತ್ತಾ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನಿಗೆ ದೇಶದಲ್ಲಿ ಅಧಿಕಾರ ಸಿಕ್ಕಿದೆ ಅವರಿಗೆ ಶಕ್ತಿತುಂಬುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು ಮಾತನಾಡಿಇಡೀ ದೇಶ ಮೋದಿಯವರನ್ನು ಒಪ್ಪಿಕೊಂಡಿದೆ ಮೋದಿಯವರ ದಕ್ಷ ಆಡಳಿತದ ಜೊತೆಗೆ ಕಳಂಕ ರಹಿತ ರಾಜಕಾರಣ ಎಂದರೆ ಅದು ಮೋದಿಜಿ ನೇತೃತ್ವದಲ್ಲಿ 3 ನೆ ಬಾರಿಗೆ ಜನಾಂದೇಶ ಸಿಕ್ಕಿರುವುದೇ ಸಾಕ್ಷಿ ಎಂದರು ಈ ಸಂದರ್ಭದಲ್ಲಿ ಸೂರ್ಯ ಪಾಪಣ್ಣ, ಹೊಂಬಾಳೆ ರೇವಣ್ಣ, ತಾಲೂಕು ಅಧ್ಯಕ್ಷ ಬಣವಿಕಲ್ಲು ನಾಗರಾಜು, ನಿಕಟ ಪೂರ್ವ ತಾಲೂಕು ಅಧ್ಯಕ್ಷ ಚನ್ನಪ್ಪ, ಸಣ್ಣಬಾಲಪ್ಪ, ನಾಗಭೂಷಣ್ಣ, ಶಾರದಾ ಕುಂಬಾರ್, ಹೊಸಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಕಲ್ಲೇಶ ಗೌಡ್ರು, ವಕೀಲರಾದ ಗಿರೀಶ, ಮಾರುತಿ ನಾಯಕ ಸಿ.ಎಸ್ ಪುರ, ಭಾರತ್, ರಾಮ್, ಸೋಲದಹಳ್ಳಿ ಮಾರೇಶ್, ಬಸವರಾಜ್ ಸೇರಿದಂತೆ ಬಿಜೆಪಿಯ ಮುಖಂಡರು, ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend