ರಸ್ತೆ ಬದಿ ಹಣ್ಣಿನ ವ್ಯಾಪಾರಿಗಳ ಕಷ್ಟ – ಸುಖ ವಿಚಾರ ; ಬರದ ನಾಡು ನೇರಳೆ ಹಣ್ಣಿನ ರುಚಿ ಸವಿದು ಖುಷಿ ಪಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ….!!!

Listen to this article

ರಸ್ತೆ ಬದಿ ಹಣ್ಣಿನ ವ್ಯಾಪಾರಿಗಳ ಕಷ್ಟ – ಸುಖ ವಿಚಾರ ; ಬರದ ನಾಡು ನೇರಳೆ ಹಣ್ಣಿನ ರುಚಿ ಸವಿದು ಖುಷಿ ಪಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ‌. ಶ್ರೀನಿವಾಸ್. ಎನ್. ಟಿ. ಅವರು ಇಂದು ತಮ್ಮ ಹುಟ್ಟು ಊರು ನರಸಿಂಹಗಿರಿ ಗ್ರಾಮದಿಂದ ಕೂಡ್ಲಿಗಿ ಪಟ್ಟಣಕ್ಕೆ ತೆರಳುವ ರಸ್ತೆ ಬದಿಯಲ್ಲಿ ಕಕ್ಕುಪ್ಪಿ ಹಣ್ಣಿನ ವ್ಯಾಪಾರಿಯಾದ ಲಚ್ಚಮ್ಮ ಅವರನ್ನು ಮಾತನಾಡಿಸಿ ನೇರಳೆ ಹಣ್ಣು ಖರಿದೀಸಿದರು.‌ ಅವರ ಮೂಲಕ ಕಕ್ಕುಪ್ಪಿ ಗ್ರಾಮದ ಹಣ್ಣಿನ ವ್ಯಾಪಾರಿಗಳಾದ ಲಲಿತಮ್ಮ, ಸರೋಜಮ್ಮ, ಕೊಟ್ರೇಶಸ್ವಾಮಿ, ಗಂಗಮ್ಮ, ಗುರುಮೂರ್ತಿ, ಪಕ್ಕೀರಪ್ಪ, ಹನುಮಂತಪ್ಪ , ಅಂಜಿನಪ್ಪ, ಕಲ್ಡಿ ಬಸಣ್ಣ ಅವರ ಬಗ್ಗೆ ಮಾಹಿತಿ ಪಡೆದುಕೊಂಡರು. ಹಣ್ಣಿನ ವ್ಯಾಪಾರಿಗಳ ಕಷ್ಟ – ಸುಖ ವಿಚಾರಿಸಿ ಹಣ್ಣಿನ ವ್ಯಾಪಾರ ಹೇಗೆ ನಡೆಯುತ್ತದೆ ಎಂಬುದಾಗಿ ವಿಚಾರಿಸಿದರು. ಬರದ ಸೀಮೆಯ ಕುರುಚಲು ಕಾಡಿನ ಮಧ್ಯೆ ನೈಸರ್ಗಿಕವಾಗಿ ಉತ್ತಮ ಇಳುವರಿಯಾಗಿ ಬಂದ ನೇರಳೆ ಹಣ್ಣಿನ ರುಚಿ ಸವಿದು ಸಂತಸ ವ್ಯಕ್ತಪಡಿಸಿ ಖುಷಿ ಪಟ್ಟರು. ತಮಗೂ ಒಳಿತಾಗಲಿ ಎಂದೂ ಶುಭಾ ಹಾರೈಸಿದರು…

ವರದಿ. ಎಂ. ಬಸವರಾಜ್. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend