ಚೆನ್ನದಾಸರ ಕುಂದುಕೊರತೆ ಆಲಿಸಿದ ಶಾಸಕರಾದ ಡಾ.‌ ಶ್ರೀನಿವಾಸ್ ಎನ್. ಟಿ…!!!

Listen to this article

21 ನೇಯ ಶತಮಾನದ ಅತಂತ್ರ ಸ್ಥಿತಿಯಲ್ಲಿ ಚೆನ್ನದಾಸರು ; ಮನುಷ್ಯ ಸಾಯುವ ಒಳಗೆ ಸೂರು ಕಲ್ಪಿಸಿಕೊಡುವೆ. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಚಿಕ್ಕಜೋಗಿಹಳ್ಳಿಯ ಚೌಡೇಶ್ವರಿ ಕಾಲೋನಿಯಲ್ಲಿ 40 ವರ್ಷಗಳಿಂದ ನೆಲೆನಿಂತ ಅಲೆಮಾರಿ ಸಮುದಾಯವಾದ ಚೆನ್ನದಾಸರನ್ನು ಮಾನ್ಯಶಾಸಕರಾದ ಡಾ.‌ ಶ್ರೀನಿವಾಸ್ ಎನ್. ಟಿ. ಅವರು  ಭೇಟಿ ನೀಡಿ ಕುಂದುಕೊರತೆ ಆಲಿಸಿದರು. ಇಲ್ಲಿ 50 ಕುಟುಂಬಗಳಿರುವ 150 ಜನಸಂಖ್ಯೆ ಇರುವ ಸ್ಟೇಷನರಿ ಬೀದಿ ವ್ಯಾಪಾರ ನೆಚ್ಚಿಕೊಂಡು ಬದುಕುತ್ತಿದ್ದಾರೆ.‌

ಸರ್ಕಾರಿ ಆಧಾರ- ರೇಷನ್ ಕಾಡ್೯, ಚುನಾವಣೆ ಗುರುತಿನ ಚೀಟಿ ಇವರಿಗೆ ಆಧಾರ. ಹತ್ತನೇಯ ತರಗತಿ ವರೆಗೂ ಶಿಕ್ಷಣ ಪಡೆದು ಬಡತನ ಕಾರಣಕ್ಕಾಗಿ ಮೊಟಕುಗೊಳಿಸಿದ್ದಾರೆ.‌ ಶಾಸಕರು, ಚೆನ್ನದಾಸರ ಕಷ್ಟ- ಸುಖ ವಿಚಾರಿಸಿದರು. ಸರ್ಕಾರ ಇದುವರೆಗೂ ಯಾವುದೇ ರೀತಿ ವಸತಿ ವ್ಯವಸ್ಥೆಯನ್ನು ನಮಗೆ ಕಲ್ಪಿಸಿಕೊಟ್ಟಿರುವುದಿಲ್ಲ ಎಂದೂ ತಮ್ಮ ಅಳಲು ತೋಡಿಕೊಂಡರು. ನಾವು ಪ್ರತಿ ಸಲ ಚುನಾವಣೆ ಬಂದಾಗ ತಪ್ಪದೇ ಮತದಾನ ಮಾಡುತ್ತೇವೆ. ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ನಮ್ಮನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದೂ ದೂರಿದರು.‌ ಶಾಸಕರು ಮಾತನಾಡಿ, ತಮ್ಮ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮನುಷ್ಯ ಸಾಯುವ ಒಳಗೆ ಯಾರೂ ಅತಂತ್ರ ಸ್ಥಿತಿಯಲ್ಲಿ ಇರದಂತೆ ಸರ್ಕಾರದ ಮಟ್ಟದಲ್ಲಿ ತಮಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend