ಇಹಲೋಕ ತ್ಯಜಿಸಿದ ರಾಮೋಜಿ ರಾವ್-ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ…!!!

Listen to this article

ಇಹಲೋಕ ತ್ಯಜಿಸಿದ ರಾಮೋಜಿ ರಾವ್-ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಆಂದ್ರಪ್ರದೇಶ ಮೂಲದ ಮಾಧ್ಯಮ ಲೋಕದ ದಿಗ್ಗಜರು, ಹಾಗೂ ಈ ನಾಡು ಮತ್ತು ಈ ಟಿವಿ ಮಾಧ್ಯಮ ಸಂಸ್ಥೆಗಳ ನಿರ್ಮಾತೃಗಳಾದ ರಾಮೋಜಿ ರಾವ್ ರವರು. ಶನಿವಾರ ಇಹ ಲೋಕ ತ್ಯಜಿಸಿದ್ದು ಅವರ ಅಗಲಿಕೆಗೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಪತ್ರಕರ್ತ ಹಾಗೂ ಸಂಘದ ಗೌರವಾಧ್ಯಕ್ಷರಾದ ವಿ.ಜಿ.ವೃಷಭೇಂದ್ರ, ನುಡಿನ ಮನ ಸಲ್ಲಿಸಿ ಮಾತನಾಡಿದರು. ರಾಷ್ಟ್ರ ಕಂಡ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ದಿಗ್ಗಜರಲ್ಲಿ, ರಾಮೋಜಿರಾವ್ ರವರು ಪ್ರಮುಖರಾಗಿದ್ದಾರೆ. ಅವರ ಅಗಲಿಕೆ ಪತ್ರಿಕೊಧ್ಯಮ ಹಾಗೂ ಮಾಧ್ಯಮ ಲೋಕಕ್ಕೆ, ತುಂಬಲಾರದ ನಷ್ಟವಾಗಿದೆ. ಅವರು ಸಿನಿಮಾ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಕ್ಕೆ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಈಟಿವಿ ಹಾಗೂ ಈ ನಾಡು ಮಾಧ್ಯಮ ವೃಂಧವನ್ನು ಹುಟ್ಟು ಹಾಕಿದ್ದು, ರಾಮೋಜಿ ಫಿಲ್ಮ ಸಿಟಿ ನಿರ್ಮಾತೃಗಳಾದ ರಾಮೋಜಿ ರಾವ್(88)ರವರು, ಶನಿವಾರ ಇಹಲೋಕ ತ್ಯಜಿಸಿದ್ದಾರೆ. ರಾಮೋಜಿ ರಾವ್ ರವರ ಅಗಲಿಕೆಯಿಂದಾಗಿ, ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ರಾಮೋಜಿರಾವ್ ರವರ ಅಗಲಿಕೆಗೆ ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರಿ, ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು. ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಾಲುಮನಿ ರಾಘವೇಂದ್ರ, ಪತ್ರಕರ್ತರಾದ ಟಿ.ಭಾಗ್ಯಮ್ಮ, ಗುನ್ನಳ್ಳಿ ಶ್ರೀಧರ, ಅಬ್ದುಲ್ ಹಸೀಬ್, ವೈ.ಮಹಾದೇವ, ಎ.ಎಮ್.ಬಸವರಾಜ ಸ್ವಾಮಿ, ಗುನ್ನಿ ರಾಘವೇಂದ್ರ, ಮೀನುಕೇರಿ ತಿಪ್ಪೇಸ್ವಾಮಿ, ಸಿ.ಅರುಣ್ ಕುಮಾರ್, ಮಲ್ಲಾಪುರ ತಿಪ್ಪೇಸ್ವಾಮಿ, ಹೆಚ್.ವೀರೇಶ, ಮತ್ತು ಮಾಜಿ ಸೈನಿಕರಾದ ರಮೇಶ ಇದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend