ಅಲಾವಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮನೋಜ್ ಕುಮಾರ್ ಆಯ್ಕೆ
ಕಾನ ಹೊಸಹಳ್ಳಿ: ಹಿಂದು ಮುಸ್ಲಿಮ್ ಭಾವೈಕ್ಯ ಸಂದೇಶ ಸಾರುವ ಮೊಹರಂ ಅಲಾವಿ ಪರಪಂರೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ದೇವರ ಮನೆ ಮನೋಜ್ ಕುಮಾರ್ ಅವರನ್ನು ಮೊಹರಂ ಅಲಾವಿ ಸಂಘದ ವಿಜಯನಗರ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಹಜರತ್ ಸೈಯದ ಮುಬಾರಕ ಬಾದಷಾ ಇವರ ಆದೇಶ ಮೇರೆಗೆ ಹಾಗೂ ಸೂಫಿ ಹಜರತ್ ಹುಸೇನ ಬಾಷಾ ನೀಡಗೋಳ ಇವರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ವೇಳೆ ನೂತನ ಅಲ್ಲವಿ ಸಂಘದ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ ಅಲಾವಿ ಸಂಘವನ್ನು ಬಲಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ತಿಳಿಸಿದರು. ಈ ವೇಳೆ ಹಿಂದು ಹಾಗೂ ಮುಸ್ಲಿಂ ಸಮುದಾಯದವರು, ಮೋಹರಂ ದೇವರ ಭಕ್ತಾದಿಗಳು ಅಭಿನಂದಿಸಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ್ದ ಲೋಕಸಭಾ ಅಭ್ಯರ್ಥಿ ಈ ತುಕಾರಾಮ್ ಅವರು ಗೆಲುವು ಸಾಧಿಸಿರುವುದು ಎಲ್ಲ ಕಾರ್ಯಕರ್ತರಿಗೆ ಅತೀವ ಸಂತೋಷವನ್ನುಂಟು ಮಾಡಿದೆ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಮತ್ತು ಶಾಸಕರ ನಿರ್ದೇಶನದಂತೆ ಕೆಲಸ ಮಾಡಿ ಈ ತುಕಾರಾಮ್ ಅವರ ಗೆಲುವಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕೂಡ್ಲಿಗಿ ರಾಜೀವ್ ಗಾಂಧಿನಗರದ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಎಲ್ಲ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಆಚರಿಸಿದರು ಈ ಸಂದರ್ಭದಲ್ಲಿ ಕಾಲ್ಚಟ್ಟಿ ಕೃಷ್ಣ ಮಾತನಾಡಿ ನಮ್ಮ ಶಾಸಕರ ಸಲಹೆಯಂತೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ ಬಾರಿಸಿರುವುದು ಅತೀವ ಸಂತೋಷವನ್ನುಂಟು ಮಾಡಿದೆ ಎಂದರು ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಈ ಬಾರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿ ತೋರಿಸಿಕೊಟ್ಟಿದ್ದೇವೆ ಎಂದು ಕಾರ್ಯಕರ್ತರು ಮಾತನಾಡಿದರು ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಲೋಕಸಭಾ ಸದಸ್ಯರನ್ನು ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವಂತೆ ನಾವು ಜೊತೆಗೂಡಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಾಲ್ ಚಟ್ಟಿ ಕೃಷ್ಣಪ್ಪ ನಾಗೇಂದ್ರ ರಾಜೀವ್ ಗಾಂಧಿನಗರ ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯಿತಿ ಪರಾಜಿತ ಅಭ್ಯರ್ಥಿ ವ್ಯವಸಾಯ ಸೇವಾ ಸಹಕಾರ ಸಂಘ ಕೂಡ್ಲಿಗಿ ನಿರ್ದೇಶಕರು ಆದ ನಲ್ಲ ಮುತ್ತಿ ದುರ್ಗೇಶ್ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ತಾಲೂಕು ಉಪಾಧ್ಯಕ್ಷ ಕಾಂಗ್ರೆಸ್ ಸೇವೆದಳ ಜಿಂಕಲರ್ ನಾಗೇಶ್ ಮುಖಂಡರಾದ ಸೀನಣ್ಣ ತಿಮ್ಮಪ್ಪ ಸಿದ್ದಪ್ಪ ನಿಂಗಜ್ಜ ಇನ್ನು ಹೆಚ್ಚು ಕಾಂಗ್ರೆಸ್ ಮುಖಂಡರುಹಾಜರಿದ್ದರುಲೋಕಸಭಾ ಅಭ್ಯರ್ಥಿ ತುಕಾರಾಮ್ ಅವರ ಗೆಲುವಿನ ಸಂಭ್ರಮಾಚರಣೆ ಕೂಡ್ಲಿಗಿ ರಾಜೀವ್ ಗಾಂಧಿನಗರ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030