ಆಯುಷ್ ಇಲಾಖೆ ಸಿಬ್ಬಂದಿ ಪಿ ಲಿಂಗರಾಜ್ ನಿವೃತ್ತಿ ಬೀಳ್ಕೊಡುಗೆ ಸಮಾರಂಭ…!!!

Listen to this article

ಆಯುಷ್ ಇಲಾಖೆ ಸಿಬ್ಬಂದಿ ಪಿ ಲಿಂಗರಾಜ್ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಆಯುಷ್ ಕೇಂದ್ರದ ಡಿ ಗ್ರೂಪ್ ನೌಕರ ಪಿ ಲಿಂಗರಾಜ್ ನವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹೂಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಡಿ ಗ್ರೂಪ್ ನೌಕರರ ಪಿ ಲಿಂಗರಾಜ್ ಕೂಡ್ಲಿಗಿ ತಾಲೂಕಿನ ಅರಣ್ಯ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದು ನಂತರ ಸರ್ಕಾರದ ಆದೇಶದಂತೆ ಬಳ್ಳಾರಿ ಜಿಲ್ಲೆಯ ಎರಗುಡಿ ಗ್ರಾಮದ ಆಯುಷ್ ಕೇಂದ್ರದಲ್ಲಿ 8 ವರ್ಷ ಹಾಗೂ ಹೂಡೇಂ ಆಯುಷ್ ಕೇಂದ್ರದಲ್ಲಿ 12 ವರ್ಷ ಸೇವೆ ಸಲ್ಲಿಸಿದ್ದು, ಒಟ್ಟು 30 ವರ್ಷ ಡಿ ಗ್ರೂಪ್ ನೌಕರ ರಾಗಿಸೇವೆ ಸಲ್ಲಿಸಿದ್ದು ಸರ್ಕಾರದ ಆದೇಶದಂತೆ ವಯೋ ನಿವೃತ್ತಿಹೊಂದಿದ್ದರಿಂದ.

ಹೂಡೇಂ ಗ್ರಾಮದ ಆಯುಷ್ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಹೂಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರ ಲಿಂಗರಾಜ್ ರವರಿಗೆ ಹೂಮಾಲೆ ಹಾಕಿ ಗೌರವಿಸಿ ಬೀಳ್ಕೊಡುಗೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ವೈದ್ಯಧಿಕಾರಿ ಡಾ ಧರ್ಮಸಿಂಗ್ ಭಾಗವಹಿಸಿ ಲಿಂಗರಾಜು ಇವರನ್ನು ಸನ್ಮಾನಿಸಿ ಮಾತನಾಡಿದರು ಅವರ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕ ವಾಗಿ ಕರ್ತವ್ಯ ನಿರ್ವಹಿಸಿದವರಾಗಿದ್ದು, ಸಾರ್ವಜನಿಕರಲ್ಲಿ ಉತ್ತಮ ಬಾಂದವ್ಯ ಉಳ್ಳವರಾಗಿದ್ದರು ಎಂದು ತಿಳಿಸಿ, ವಿಶ್ರಾಂತ ಜೀವನ ಸುಖ ಕರವಾಗಿರಲಿ ಆಶೀಸಿದರು, ಈ ಸಂದರ್ಭದಲ್ಲಿ ಡಾ ಶಿವಲಿಂಗಪ್ಪ, ಚಂದ್ರಪ್ಪ, ಸಿಬ್ಬಂದಿಗಳು ಉಷಾ, ಲಕ್ಷ್ಮಿ ಸೇರಿದಂತೆ ಇತರೆ ಸಿಬ್ಬಂದಿಗಳು ಸಾರ್ವಜನಿಕರು ಹಾಜರಾಗಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend