ಕೂಡ್ಲಿಗಿಯ ಗ್ರಾಮೀಣ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನೇ ನಂಬಿ ಬದುಕುವುದರಿಂದ ಡಾ. ಶ್ರೀನಿವಾಸ್. ಎನ್. ಟಿ. ಅವರು ಶಾಸಕರಾದಾಗಿನಿಂದಲೂ ನಿರಂತರ ಪ್ರಯತ್ನದಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ನಮ್ಮ ತಾಲೂಕಿನ ಗುಂಡಿನ ಹೊಳೆ ಪ್ರದೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ನಮ್ಮಲ್ಲಿ ಇಂತಹ ಮಹತ್ವದ ಅವಕಾಶಕ್ಕಾಗಿ ಶ್ರಮಿಸಿ ಸಹಕಾರ ನೀಡಿ ಪ್ರೋತ್ಸಾಹಿಸಿದ ಕರ್ನಾಟಕ ಸರ್ಕಾರದ ಸನ್ಮಾನ್ಯ ಸಿ. ಎಂ. ಸಿದ್ದರಾಮಯ್ಯನವರು, ಸನ್ಮಾನ ಡಿಸಿಎಂ, ಡಿ. ಕೆ ಶಿವಕುಮಾರ್ ಅವರು, ಮಾನ್ಯ ಕೃಷಿ ಸಚಿವರಾದ ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಜೆ.ಡ್. ಜಮೀರ್ ಅಹಮ್ಮದ್ ಖಾನ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ಈ. ತುಕಾರಾಮ್, ಕೆ.ಎಂ.ಎಫ್. ಅಧ್ಯಕ್ಷಾದ ಭೀಮನಾಯಕ್, ಕೃಷಿ ಇಲಾಖೆ ಕಾರ್ಯದರ್ಶಿಗಳಾದ ಅನುಬ್ ಕುಮಾರ್, ಆಯುಕ್ತರಾದ ವೈ. ಎಸ್. ಪಾಟೀಲ್, ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ. ಎಸ್. ದಿವಾಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್ ಇವರುಗಳಿಗೆ ನಮ್ಮ ಕೂಡ್ಲಿಗಿ ಸಮಸ್ತ ಜನತೆಯ ಪರವಾಗಿ ಇಂದು ಇಂದು ರಾಷ್ಟ್ರಪಿತ ಗಾಂಧಿ ಚಿತಾಭಸ್ಮದಲ್ಲಿ ನೆರವೇರಿದ ಗಾಂಧಿ ಜಯಂತಿಯ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ ಅವರು ಸಮಸ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು…
ವರದಿ. ಅನಿಲ್ ಕುಮಾರ್ ಹುಲಿಕುoಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030