ಕಾನಹೊಸಹಳ್ಳಿ ಸಿಡಿಲು ಬಡಿದು ಎತ್ತು ಸಾವು…!!!

Listen to this article

ಕಾನಹೊಸಹಳ್ಳಿ ಸಿಡಿಲು ಬಡಿದು ಎತ್ತು ಸಾವು…
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿರುವ ಘಟನೆ ಗುಂಡುಮುಣಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಡ್ಲಕನಹಳ್ಳಿ ಗೋಲ್ಲರಹಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಸಂಜೆ ಜರುಗಿದೆ ಗ್ರಾಮದ ದೊಡ್ಡಬಾಲಪ್ಪ ಎಂಬುವವರು ವ್ಯವಸಾಯ ಕೆಲಸಕ್ಕಾಗಿ ಮೂರು ತಿಂಗಳ ಹಿಂದೆ 85,000ಗಳಿಗೆ ಎರಡು ಎತ್ತುಗಳನ್ನು ಖರೀದಿ ಮಾಡಿಕೊಂಡು ಬಂದಿದ್ದ ಈ ಎರಡು ಎತ್ತುಗಳು ಮನೆಯಲ್ಲಿ ಸಾಕಿಕೊಂಡು ಬಂದಿದ್ದ ದಿನಾಂಕ 29/ 9 /2024 ರಂದು ದೊಡ್ಡ ಬಾಲಪ್ಪ ಮತ್ತು ಆತನ ಮಗ ಹಾಗೂ ಇತರರು ಜಮೀನಿನಲ್ಲಿ ಜೋಳ ಕೊಯ್ಯಲು ಹೋಗಿದ್ದರು ಎತ್ತುಗಳನ್ನು ಹೊಲದ ಬದುವಿನಲ್ಲಿ ಕಟ್ಟಿ ಹಾಕಿದ್ದು, ಸಂಜೆ 6:30ರ ಸಮಯದಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದ್ದರಿಂದ ಜೋಳ ಕೊಯ್ಯಲು ಬಂದಿರುವ ದೊಡ್ಡ ಬಾಲಪ್ಪ ಮತ್ತು ಮಗ ಇತರರು ಗಿಡಗಳ ಮರೆಯಲ್ಲಿ ಅವಿತು ಕುಳಿತುಕೊಂಡಿದ್ದು ಸ್ವಲ್ಪ ಹೊತ್ತಿನಲ್ಲಿ ಮಳೆಬಿಟ್ಟ ನಂತರ ಬಂದು ಎತ್ತುಗಳನ್ನು ನೋಡಿದಾಗ ಒಂದು ಎತ್ತು ಮೃತಪಟ್ಟಿತ್ತು ಇನ್ನೊಂದು ಎತ್ತನ್ನು ಬೇರೆ ಕಡೆ ಕಟ್ಟಿದ್ದರಿಂದ ಸುರಕ್ಷಿತವಾಗಿ ಇತ್ತು ಕಷ್ಟಪಟ್ಟು ಕೂಲಿ ಮಾಡಿ ದುಡಿದು ವ್ಯವಸಾಯ ಮಾಡಲಿಕ್ಕೆ ಖರೀದಿ ಮಾಡಿಕೊಂಡು ಬಂದ ಸುಮಾರು 50,000 ಬೆಲೆಬಾಳುವ ಎತ್ತು ಸಿಡಿಲು ಬಡಿದು ಮೃತಪಟ್ಟಿರುವುದರಿಂದ ಎತ್ತಿನ ಸಾವಿನ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ದೊಡ್ಡ ಬಾಲಪ್ಪ ಕೊಟ್ಟ ದೂರಿನಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend