ಹೊಳಲ್ಕೆರೆ : ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ. ವಿದ್ಯಾರ್ಥಿಗಳು ಸತತ ಅಧ್ಯಯನ ಜತೆ ಮಾನವೀಯ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳಬೇಕೆಂದು ಹೈಕೋರ್ಟ ವಿಶ್ರಾಂತ ನ್ಯಾಯಾಮೂರ್ತಿ ಹೆಚ್.ಬಿಲ್ಲಪ್ಪ ತಿಳಿಸಿದರು.
ಅವರು ತಾಲೂಕು ದಲಿತ ಸಂಘರ್ಷ ಸಮಿತಿ ಬುಧವಾರ ಪಟ್ಟಣದ ಎಸ್.ಟಿ.ಹಾಸ್ಟೆಲ್ ಆವರಣದಲ್ಲಿ ಹಮ್ಮಿಕೊಂಡ ಡಾ.ಬಾಬಾ ಸಾಹೇಬ್ ಬಿ.ಆರ್.ಆಂಬೇಡ್ಕರ್ ಹೋರಾಟದ ಕರೆಗೆ ಶತಮಾನದ ಸಂಭ್ರಮ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಮಹನ್ ಸಾಧಕರು, ಅವರ ಸಾಧನೆ ನಮಗೇಲ್ಲ ದಾರಿ ದೀಪವಾಗಬೇಕು. ಪ್ರತಿಯೊಬ್ಬರು ಸಂವಿಧಾನವನ್ನು ಚನ್ನಾಗಿ ಓದಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬದುಕು ಅಳವಡಿಸಿಕೊಂಡಾಗ ದೇಶದ ಉತ್ತಮ ಪ್ರಜೆಯಾಗಿಲು ಸಾಧ್ಯ ಎಂದು ಸಲಹೆ ನೀಡಿದರು.
ತಾಲೂಕು ಸಂಚಾಲಕ ಡಿ.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಬೀಬಿ ಫಾತೀಮಾ, ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಸತ್ಯ ಭದ್ರಾವತಿ, ರಾಜ್ಯ ಸಮಿತಿ ಸದಸ್ಯ ಟಿ.ಕಸ್ತೂರಪ್ಪ, ಮಹಾಲಿಂಗಪ್ಪ ಕುಂಚಿಗನಾಳ್, ಶ್ರೀನಿವಾಸ್, ಕೆ.ರಾಜಣ್ಣ, ಮಲ್ಲಿಕಾರ್ಜುನ್, ಮಂಜುನಾಥ್, ಪುರಸಭೆ ಸದಸ್ಯರಾದ ವಸಂತರಾಜ್, ಬೊಮ್ಮನಕಟ್ಟೆ ಕುಮಾರ್, ವಕೀಲರಾದ ವಿಜಯಕುಮಾರ್, ಕೆಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ, ಪಿಎಸ್ಐ ಸುರೇಶ್, ದಲಿತ ಮುಖಂಡ ರಾಜಪ್ಪ, ಚಂದ್ರಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ಸೂರೇಗೌಡ್ರು, ಎ.ಚಿತ್ತಪ್ಪ, ಮತ್ತೀತರರು ಪಾಲ್ಗೊಂಡಿದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030