ಹೊಳಲ್ಕೆರೆ : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 2018 ರಿಂದ 27-06-2024 ರ ವರೆಗೆ ವಿವಿಧ ಯೋಜನೆಯಡಿ ನಿರ್ಮಾಣ ಮಾಡಿದ ಕೆರೆ, ಚಕ್ ಡ್ಯಾಂ ಕಾಮಗಾರಿಗಳಲ್ಲಿ ಸಾಕಷ್ಟು ಕಳಪೆಯಾಗಿದೆ. ಕಳಪೆ ಕಾಮಗಾರಿಗಳನ್ನು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಳಿಕಟ್ಟೆ ರೈತ ರೇವಣಸಿದ್ದಪ್ಪ ಸಣ್ಣ ನೀರಾವರಿ ಇಲಾಖೆ ಕಚೇರಿ ಎದುರು ಗುರುವಾರ ಉಪವಾಸ ಸತ್ಯಗ್ರಹ ನಡೆಸಿದರು.
ಬಳಿಕ ಮಾತನಾಡಿ, ತಾಲೂಕಿನ ರಾಮಗಿರಿ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ಅಭಿವೃದ್ದಿ ನಿಟ್ಟಿನಲ್ಲಿ ಕೆರೆ, ಚಕ್ ಡ್ಯಾಂ ನಿರ್ಮಾಣಕ್ಕೆ ಕೋಟ್ಯಾಂತ ಅನುದಾನ ವ್ಯಯಿಸಿದೆ. ಸಿಮೇಟ್, ಕಬ್ಬಿಣ ಕಿತ್ತು ಹೊಗಿದ್ದು, ಕಲ್ಲಿಗಳು ಹೊರಬಂದಿವೆ. ಮೇಲ್ನೋಟಕ್ಕೆ ಭ್ರಷ್ಟಾಚಾರದ ಸಾಧ್ಯತೆ ಇದ್ದು, ಎಲ್ಲಾ ಕಾಮಗಾರಿಗಳನ್ನು ಸಮಗ್ರ ತನಿಖೆ ನಡೆಸಬೇಕೆಂದು ಜಿಲ್ಲಾಢಳಿತಕ್ಕೆ ಮನವಿ ಮಾಡಿದರು.
ಸಹಾಯಕ ಇಂಜನೀಯರ್ ಶರಣಪ್ಪ ಮನವಿ ಸ್ವೀಕರಿಸಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030