ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಈದ್ ಮಿಲಾದ್ ಸಂಭ್ರಮದಿಂದ ಆಚರಣೆ…
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಪೈಗಂಬರ್ ಜನಿಸಿದ ದಿನವನ್ನು ಈದ್ ಮಿಲಾದ್ ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ.
ಈ ದಿನದಂದು ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಮ್ಮದ್ ಪೈಗಂಬರ್ ಸಂದೇಶವನ್ನು ಸಾರುತ ಪಟ್ಟಣದ ರಾಮನಗರದಿಂದ ಬಸವೇಶ್ವರ ಸರ್ಕಲ್ ಮೆರವಣಿಗೆಯ ಮುಖಾಂತರ ಬಂದು ಮುಸ್ಲಿಂ ಬಾಂಧವರಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಹಿಂದೂ ಮುಸ್ಲಿಂ ಭಾವೈಕ್ಯತೆ ಬಿಂಬಿಸಿದರು. ಮುಸ್ಲಿಂ ಮುಖಂಡರು ಮಾತನಾಡಿ ಮಹಮ್ಮದ್ ಪೈಗಂಬರ ಪ್ರೀತಿ ಶಾಂತಿ ಸೌಹಾರ್ದತೆಯಿಂದ ಒಂದಾಗಿ ಬಾಳೋಣ ಎಂಬ ಸಂದೇಶವನ್ನು ಸಾರೋಣ.
ಕುಲ ಜಾತಿ ಧರ್ಮ ಎಲ್ಲವನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳೋಣ. ಈ ಹಬ್ಬವನ್ನು ಎಲ್ಲಾ ಧರ್ಮದವರು ಜನಾಂಗದವರು ಸಂಭ್ರಮ ಸಡಗರದನ್ನು ಕಣ್ತುಂಬಿಕೊಂಡು ಸಂತೋಷ ಪಟ್ಟರು. ಹಾಗೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಹಕರಿಸಿದ ಪೊಲೀಸ್ ಇಲಾಖೆಗೂ ಎಲ್ಲಾ ಧರ್ಮದ ಬಾಂಧವರಿಗೂ ಹಾಗೂ ಪತ್ರಕರ್ತರಿಗೂ, ಮಾಧ್ಯಮದವರಿಗೂ,ಧನ್ಯವಾದಗಳು ತಿಳಿಸಿ ಮಸೀದಿ ಹತ್ತಿರ ಪ್ರಸಾದ ಸ್ವೀಕರಿಸಲು ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು…
ವರದಿ ಮ್ಯಾಗೇರಿ ಸಂತೋಷ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030