ರಾಂಪುರ ದುರ್ಗಾದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಪ್ರತಿಷ್ಠಾಪನೆ
ಮರಿಯಮ್ಮನಹಳ್ಳಿ:: ಪಟ್ಟಣದ ಆದಿ ದೇವತೆ ರಾಂಪುರ ದುರ್ಗಾದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಮಂಗಳವಾರ ನಡೆಸಲಾಯಿತು
ಶ್ರಾವಣ ಶುದ್ಧ ಸೋಮವಾರ ಪುಣ್ಯ ಹವಾಚನ ದೇವಾಂನಾದಿ ದೇವತಿಗಳ ಕಳಸ ಪ್ರತಿಷ್ಠಾಪನೆ ಉಪಚಾರ ಪೂಜೆ ನವಗ್ರಹ ಸುದರ್ಶನ ಹೋಮಗಳನ್ನು ಕಳಸಕ್ಕೆ ಆದಿವಾಸಿಗಳು ಜರುಗಲಿದ್ದಾವೆ, ಮಂಗಳವಾರ ಬೆಳಗ್ಗೆಯಿಂದ ಕಳಸ ಪ್ರತಿಷ್ಠಾನ ದೇವತೆಗಳ ಪೂಜೆ , ಹೋಮ, ಮಹಾ ಅಭಿಷೇಕ ಹಾಗೂ ಶುಭ ಮುಹೂರ್ತದಲ್ಲಿ 11.30 ಕ್ಕೆ ಕುಂಭಮೇಳ ಮುಖಾಂತರ ಕಳಸಾರೋಹಣ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಕಾರ್ಯಕ್ರಮದಲ್ಲಿ ಪಟ್ಟಣದ ಗುರುಪಾದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಜಿ ನಾಗಲಾಪುರದ ಶ್ರೀ ಒಪ್ಪತ್ತೇಶ್ವರ ಸ್ವಾಮಿ ಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ನಂದಿಪುರ ಡಾ ಮಹೇಶ್ವರ ಸ್ವಾಮಿಗಳು, ವಿಧಾನಸಭಾ ಶಾಸಕ ನೇಮರಾಜ್ ನಾಯಕ್ ಹಗರಿಬೊಮ್ಮನಹಳ್ಳಿ, ರಾಂಪುರ ದುರ್ಗಾದೇವಿ ಪೂಜಾರ್ ಬಸಪ್ಪ, ರಾಮಾಂಜನಿ, ಪ್ರಕಾಶ್ ವಕೀಲರು, ಊರಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ವರದಿ. ಸಂತೋಷ, ಮ್ಯಾಗೇರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030