ಹೂವಿನಹಡಗಲಿ:ಮೃತ ಅನಾಥ ವೃದ್ಧೆಯ ಶವ ಸಂಸ್ಕಾರ ನೆರವೇರಿಸಿದ ಸಮಾಜ ಸೇವಕಿ-ಯಶೋಧ- ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ:ಪಟ್ಟಣದ ರಾಮದ್ರವರ ದೇವಸ್ಥಾನ ಹತ್ತಿರದ ವಾಸಿ, ಅನಾಥ ಸ್ಥಿತಿಯಲ್ಲಿದ್ದ ವಯೋ ವೃದ್ಧೆ ಪಾರ್ವತಮ್ಮಳನ್ನು. ಸಮಾಜ ಸೇವಕರು ಹೋರಾಟಗಾರರು, ಹಾಗೂ ಅನಾಥರ ಪಾಲಿನ ಆಪತ್ ಭಾಂದವರಾದ. ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯರಾದ ಎಸ್. ಯಶೋಧಮ್ಮ ಸಂಪೋಷಿಸಿ ರಕ್ಷಿಸಿದ್ದಳು. ಈ ಸಮಯದಲ್ಲಿ ಯಶೋಧಮ್ಮಳ ಬಳಿ ಆ ವೃದ್ಧೆ, ತನ್ನ ಅಂತ್ಯ ಸಂಸ್ಕಾರವನ್ನು ನೀನೆ ನೆರವೇರಿಸಬೇಕೆಂದು ಕೋರಿದ್ದಳಂತೆ, ಅವಳ ಅಂತಿಮ ಆಸೆ ಎಂದು ಕೋರಿ ಕೊಂಡಿದ್ದಳಂತೆ. ಅನಾರೋಗ್ಯದಿಂದ ಬಳಲುತಿದ್ದ ಅನಾಥೆ ವಯೋ ವೃದ್ಧೆ, ಪಾರ್ವತಮ್ಮ ಜುಲೈ 23ರಂದು ನಿಧನರಾಗಿದ್ದಾಳೆ. ಸಮಾಜ ಸೇವಕಿ ಯಶೋಧಮ್ಮರವರು, ತಮ್ಮ ಸಹಪಾಟಿಗಳ ನೆರವಿನೊಂದಿಗೆ ಅನಾಥ ವೃದ್ಧೆಯ ಪಾರ್ಥಿವ ಶರೀರವನ್ನು ಪಡೆದು ಹೂವಿನ ಹಡಗಲಿಯ ರುದ್ರ ಭೂಮಿಯಲ್ಲಿ ವಿಧಿ ವಿಧಾನಗಳಂತೆ ಮೃತ ಅನಾಥ ವೃದ್ಧೆಯ ಶವ ಸಂಸ್ಕಾರ ನೆರವೇರಿಸಿದ್ದಾರೆ. ನೀಲಮ್ಮ ರೇಖಾ ಹುಲಿಗೆಮ್ಮ ಸರಸ್ವತಿ ಶಾರದಮ್ಮ ಲಕ್ಷ್ಮೀ ಬದವರಾಜ, ಶಂಬಣ್ಣ ಸೇರಿದಂತೆ ರಾಮೇಶ್ವರ ದ್ರವಸ್ಥಾನದ ಸುತ್ತ ಮುತ್ತಲಿನ ನಾಗರೀಕರು ಮಹಿಳಾ ಪ್ರಮುಖರಯ, ರೈತ ಪ್ರಮುಖರು ಸೇರಿದಂತೆ ಹತ್ತಾರು ಸಾರ್ವಜನಿಕರು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿದ್ದರು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030