ಭತ್ತ ನಾಟಿ ಮಾಡುವ ಯಂತ್ರಶ್ರೀದಿಂದ ರೈತರಿಗೆ ಅನುಕೂಲ.. ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಕೃಷಿ ಇಲಾಖೆ ಸಹಕಾರದೊಂದಿಗೆ 300 ಎಕರೆ ಮುಂಗಾರು ಯಂತ್ರಶ್ರೀ ನಾಟಿ ಕುರಿತು ಓಲೇಕಾರ್ ರವರ ಇಲಾಖೆಯ ಕೃಷಿ ಜಮೀನಿನಲ್ಲಿ 25 ಎಕರೆ ಯಂತ್ರಶ್ರೀ ನಾಟಿಗೆ ಸಸಿಮಡಿ ತಯಾರಿದ್ದು ಇಂದು ದಾವಣಗೆರೆ ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ್ ಸರ್ ಸಸಿಮಡಿಗೆ ಪೂಜೆ ಮಾಡಿ ಯಂತ್ರಕ್ಕೆ ಸಸಿ ನೀಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಓಲೇಕಾರ್ ಯಂತ್ರಶ್ರೀ ನಾಟಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು, ಯೋಜನಾಧಿಕಾರಿಗಳಾದ ಶಾಂತರಾಮ್ , ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕೋಶ ಅಧ್ಯಕ್ಷರಾದ ಶಾಂತರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು,ನಾಟಿ ಬ್ಯಾಂಕ್ ಕೃಷಿ ಮೇಲ್ವಿಚಾರಕ ಸುನಿಲ್, ಪ್ರಭಂದಕ ಕೇಶವ್, ವಲಯ ಮೇಲ್ವಿಚಾರಕ ವಸಂತ್, ಕೃಷಿ ಮೇಲ್ವಿಚಾರಕ ಪ್ರೇಮ್ ಕುಮಾರ್, ಸೇವಾಪ್ರತಿನಿಧಿ ಸುಮಾ, ಹಾಗೂ ಸುತ್ತಮುತ್ತಲಿನ ರೈತರು, ಭತ್ತ ಬೆಳೆಗಾರರು, ಸಂಘದ ಸದಸ್ಯರು ಪದಾಧಿಕಾರಿಗಳು ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು..
ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030