ಸರ್ಕಾರಿ ನೌಕರರ 7ನೇ ವೇತನ ಆಯೋಗ ಶೀಘ್ರ ಜಾರಿಗೆ ಅಧಿವೇಶನದಲ್ಲಿ ಒತ್ತಾಯಿಸುವೆ ಶಾಸಕ ಕೃಷ್ಣ ನಾಯ್ಕ..
ಹೂವಿನಹಡಗಲಿ
ಏಳನೇ ವೇತನ ಆಯೋಗ ಶೀಘ್ರ ಜಾರಿ, ಗುರುಭವನ ನಿರ್ಮಾಣ ಸೇರಿದಂತೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಕೃಷ್ಣ ನಾಯ್ಕ ಅವರು ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಎರಡನೇ ಮಹಡಿಯ ನಿರ್ಮಾಣ ಕಾಮಗಾರಿಕೆ ಚಾಲನೆ ನೀಡಿ ತಾಲೂಕ್ ಸರ್ಕಾರಿ ನೌಕರರ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ಬಹಳ ದಿನಗಳಿಂದ 7ನೇ ವೇತನ ಆಯೋಗ ಜಾರಿಗೆ ತರಬೇಕೆಂಬ ಬೇಡಿಕೆ, ಒತ್ತಾಯ ಇದೆ ಸರ್ಕಾರ ಅದನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ಸರ್ಕಾರಿ ನೌಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ, ನಾನು ಈ ಬಾರಿ ವಿಧಾನಸಭಾ ಅಧಿವೇಶನದಲ್ಲಿ 7ನೇ ವೇತನ ಆಯೋಗ ಶೀಘ್ರ ಜಾರಿ ತರುವಂತೆ, ಜೊತೆಗೆ ಗುರುಭವನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಒತ್ತಡ ತಂದು ತಮ್ಮ ಬೇಡಿಕೆಗಳ ಈಡೇರಿಸುವಿಕೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು ಸಂದರ್ಭದಲ್ಲಿ ತಾಲೂಕ್ ದಂಡಾಧಿಕಾರಿ ಅಮರೇಶ್, ತಾಲೂಕ್ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮನಗೌಡ, ತಾಲೂಕ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಪಿ ಎಂ ಅಶೋಕ್, ನಿಕಟ ಪೂರ್ವ ಅಧ್ಯಕ್ಷರಾದ ಕೊಟ್ರಗೌಡ, ತಾಲೂಕ್ ಪಂಚಾಯತಿ ಅಧಿಕಾರಿ ವೀರಣ್ಣ ನಾಯ್ಕ, ಶಿಕ್ಷಕ ಶೇಕ್ ಅಹ್ಮದ್, ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು…
ವರದಿ ಮ್ಯಾಗೇರಿ ಸಂತೋಷ್ ಹೂವಿನಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030