ಸರ್ಕಾರಿ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಕೃಷ್ಣ ನಾಯ್ಕ
ಹೂವಿನ ಹಡಗಲಿ ಕ್ಷೇತ್ರವಾದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೊರಗೇರಿ ಗ್ರಾಮದ ನೂತನ 04 ಸರಕಾರಿ ಶಾಲೆ ಕೊಠಡಿಗಳ “ಶ್ರೀ ನೀಲನಗೌಡ್ರು ದೊಡ್ಡ ಲಿಂಗನಗೌಡರು ಸರಕಾರಿ ಪದವಿ ಪೂರ್ವ ಕಾಲೇಜು” ಪ್ರೌಢಶಾಲಾ ವಿಭಾಗ *ಸನ್ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಕೃಷ್ಣ ನಾಯ್ಕ್* ಸರ್ ಉದ್ಘಾಟಿಸಿ ಮಾತನಾಡಿದ ಶಾಸಕರು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕಂಪ್ಯೂಟರ್ ನೀಡುವುದರ ಜೊತೆಗೆ ಶಿಕ್ಷಕರನ್ನು ನೇಮಿಸಿದ್ದು ಮಕ್ಕಳು ಚೆನ್ನಾಗಿ ಕಲಿತು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿಕೊಟ್ಟಿದೆ ಮಕ್ಕಳು ಚೆನ್ನಾಗಿ ಓದಿಕೊಳ್ಳಬೇಕು ಹಾಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಹೀಗೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೂ ಹಂಪಾಸಾಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಮೊಬೈಲ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಜನೆಯ ಸವಲತ್ತನ್ನು ಪಡೆದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಸನ್ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಕೃಷ್ಣ ನಾಯ್ಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖಂಡರಾದ, ಕೆ. ಬಿ. ವಿರೇಶ್. ಜಯಪ್ಪ. ಪಿ. ಹನುಮೇಶ್, ಜಿತೇಂದ್ರ, ಎ. ಬಸವರಾಜ, ಕೆ. ನಾಗರಾಜ್. ಸೋಗಿ ಕೊಟ್ರೇಶ್, ಕೆ. ಮಲ್ಲಪ್ಪ ಮಹಾದೇವ ವೆಂಕಟೇಶ್ ಕಾಂಟ್ರಾಕ್ಟರ ,ಭರಮಪ್ಪ, ಕೆ. ಕರಿಬಸಪ್ಪ. ಬಿ. ಪಂಪಣ್ಣ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು. SDMC ಅಧ್ಯಕ್ಷರು, ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಗಳು, ಹಿರಿಯ ಮುಖಂಡರು, ಪ್ರಾಂಶುಪಾಲರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು….
ವರದಿ. ಸಂತೋಷ ಮ್ಯಾಗರ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030