ತುಂಗಭದ್ರಾ ಜಲಾಶಯ 19ನೇ ಕ್ರಸ್ಟ ಗೇಟ್ ಗಳನ್ನುಅಳವಡಿಸಿದ ಕನ್ಹಯ್ಯ ನಾಯ್ಡು ಅವರ ತಂಡದವರೆಗೂ ಮತ್ತು ಕರ್ನಾಟಕ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ ಕುರದಗಡ್ಡಿ ಯುವಶಕ್ತಿ ವೇದಿಕೆ ವತಿಯಿಂದ ಗಣೇಶ ಉತ್ಸವ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ 23 ನೇ ವಾರ್ಡಿನ ಕುರದಗಡ್ಡಿಯಲ್ಲಿ ಕುರದಗಡ್ಡಿ ಯುವಶಕ್ತಿ ವೇದಿಕೆ (ರಿ) ಸಂಘದವರಿಂದ 31ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ತುಂಗಭದ್ರಾ ಜಲಾಶಯ 19ನೇ ಗೇಟ್ ದುರಸ್ಥಿಯಾದಗ ಕ್ರಸ್ಟ್ ಗೇಟ್ ಅಳವಡಿಸಿದ ಶ್ರೀ ಕನ್ಹಯ್ಯ ನಾಯ್ಡು ಇವರ ನೇತೃತ್ವದಲ್ಲಿ ಕಾರ್ಮಿಕ ತಂಡದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಕ್ಕೆ ಜಿಂದಾಲ್, ಹಿಂದುಸ್ತಾನಿ, ನಾರಾಯಣ ಇಂಜಿನಿಯರ್, ಕಡಿಮೆ ಸಮಯದಲ್ಲಿ 5 ಸ್ಟಾಪ್ ಲಾಗ್ ತಯಾರಿಸಿಕೊಟ್ಟ ಇವರಿಗೂ ಕೂಡ ಕುರದಗಡ್ಡಿ ಯುವಶಕ್ತಿ ವೇದಿಕೆಯಿಂದ ಮತ್ತು ರೈತರಿಂದ ಅಭಿನಂದನೆಗಳನ್ನು ಸಲ್ಲಿಸಲು ಈ ಒಂದು ಸಣ್ಣ ತುಣುಕು ತೋರಿಸಿ. ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು . 1953ರಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸುಮಾರು 90 ಗ್ರಾಮಗಳು ನೀರುಪಾಲು ಆಗಿದ್ದವು, ಆ ಪೈಕಿ ಕುರುದಗಡ್ಡಿ ಎಂಬ ಗ್ರಾಮವು ಮೊದಲಿನದಾಗಿದೆ. ಎಂದು ಇತಿಹಾಸ ಕೂಡ ಇದೆ,
ಈ ಕಾರ್ಯಕ್ರಮದಲ್ಲಿ ಕುರುದ ಗಡ್ಡಿ ಯುವಶಕ್ತಿ ವೇದಿಕೆ (ರಿ) ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ವಾರ್ಡಿನ ಯುವಕರು ಹಿರಿಯರು ಮತ್ತು ದೈವಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿದೆ.
ವರದಿ ಮ್ಯಾಗೇರಿ ಸಂತೋಷ್ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030