ಸುಪ್ರೀಂ ಕೋರ್ಟ್ ಒಳ ಮೀಸಲಾತಿ ತೀರ್ಪು ನೀಡಿರುವುದು ಸ್ವಾಗತಾರ್ಹ
ಹಗರಿಬೊಮ್ಮನಹಳ್ಳಿ: ಸುಪ್ರೀಂ ಕೋರ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿ ನೀಡಿದರೆ ಕಾನೂನು ಉಲ್ಲಂಘನೆ ವಲ್ಲ ಮತ್ತು ಅಸಮಾನತೆ ತೋರೋದಲ್ಲ ಹಾಗಾಗಿ ಒಳ ಮೀಸಲಾತಿಯನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ ಈ ತೀರ್ಪಿಗೆ ಎಲ್ಲಾ ದಲಿತರು ಸ್ವಾಗತರ್ಯವಾಗಿದೆ ಎಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಎಚ್ ದೊಡ್ಡಬಸಪ್ಪ ಅಭಿಪ್ರಾಯಟ್ಟರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಲಿತ ಸಮುದಾಯದ ಮುಖಂಡರಿಂದ ನಡೆದ ವಿಜಯೋತ್ಸವದಲ್ಲಿ ಗುರುವಾರ ಮಾತನಾಡಿದರು. ನ್ಯಾಯಾಲಯದ ತೀರ್ಪಿನಿಂದಾಗಿ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗಿದೆ. ಕಳೆದ 30 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದರು, ಈ ಸಂಭ್ರಮ ಆಚರಣೆಯಲ್ಲಿ ಮಹೇಶ್ ಮಾದೂರ್, ಕಾಳಿ ಬಸವರಾಜ್, ಬಾಚಿಗೊಂಡನಹಳ್ಳಿ ಮಹೇಶ್, ಬನ್ನಿ ಕಲ್ ಪ್ರಕಾಶ್, ಅಡವಿ ಆನಂದ ದೇವನಹಳ್ಳಿ ಪ್ರಭು, ಲೋಕಪ್ಪ ದುರ್ಗಪ್ಪ ಮೈಲಪ್ಪ ಅರ್ಜುನ್, ಉಪ್ಪಾರ್ ಗಟ್ಟಿ ಬುಳ್ಳಪ್ಪ, ಹೆಗ್ಡಾಳ್ ರಾಜು, ಇನ್ನು ಅನೇಕ ಮುಖಂಡರು ಭಾಗವಹಿಸಿದರು…
ವರದಿ. ಮ್ಯಾಗೇರಿ ಸಂತೋಷ್ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030