ತೀಸ್ತಾ ಸೆಟ್ಲವಾಡ್ ಬಂಧನ ಖಂಡಿಸಿ ಪ್ರಗತಿಪರರಿಂದ ಪ್ರತಿಭಟನೆ.
ಸಿಂಧನೂರು. ಜೂನ್.28.ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟ್ಲವಾಡ್ ಬಂಧನವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ತಹಶೀಲ್ದಾರ ಕಚೇರಿ ಮುಂದಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಂದಿರುವ ತೀಸ್ತಾ ಸೆಟ್ಲವಾಡ್
ಅವರನ್ನು ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಚಂದ್ರಶೇಖರ ಗೊರೆಬಾಳ, ಡಿ.ಎಚ್.ಕಂಬಳಿ, ದೇವೇಂದ್ರಗೌಡ, ಗೋಪಾಲ ಕೃಷ್ಣ,ಅಬ್ದುಲ್ ಸಮದ್ ಚೌದ್ರಿ, ಬಸವರಾಜ ಬಾದರ್ಲಿ, ದುರುಗೇಶ, ಇಮ್ತಿಯಾಜ ಅಹ್ಮದ್,ಡಾ.ವಾಸಿಂ ಅಹ್ಮದ್, ಚಿಟ್ಟಿಬಾಬು,ನೂರ್ ಮಹ್ಮದ್, ಹನುಮೇಶ ಮಡಿವಾಳ,ಹಾಜಿಲ್ಲಾ,ಹಾಜಿಲ್ಲಾ ಸಾಬ್, ಅಹ್ಮದ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…
ವರದಿ ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030