ಸದ್ಧರ್ಮ ಹಿರಿಯ ನಾಗರಿಕರಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ.
ಉಜ್ಜಯಿನಿಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಉಜ್ಜಿನಿ ಗ್ರಾಮದ ಸದ್ಧರ್ಮ ಹಿರಿಯ ನಾಗರಿಕ ಸಂಘದ ವತಿಯಿಂದ
ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದ್ಧರ್ಮ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಎ.ಎಂ. ಚೆನ್ನವೀರಸ್ವಾಮಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಅನೇಕ ವಿದ್ಯಾರ್ಥಿಗಳನ್ನು ಶ್ರೇಷ್ತ ವ್ಯಕ್ತಿಗಳನ್ನಾಗಿ ಮಾಡಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಭೋಜಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಎಂದಿಗೂ ಶ್ರೇಷ್ಠವಾದದ್ದು, ನಮ್ಮ ದೇಶದ ಪ್ರಥಮ ಪ್ರಜೆಯನ್ನು ನಿರ್ಮಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅವರು ಶಿಕ್ಷಕರು ಎಂಬುದನ್ನು ನಾವ್ಯಾರೂ ಮರೆಯಬಾರದು. ಈ ಇಳಿಯ ವಯಸ್ಸಿನಲ್ಲಿಯೂ ಹಿರಿಯ ನಾಗರಿಕ ಸಂಘದವರು ಇಂತಹ ಕಾರ್ಯಕ್ರಮದ ಮೂಲಕ ಶಿಕ್ಷಕರ ವರ್ಗಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.
ಶ್ರೀಧರ್ ಶೆಟ್ರು ಮಾತನಾಡಿದರು. ಉಜ್ಜಿನಿ ಗ್ರಾಮದ ಎಸ್ ಮಲ್ಲಿಕಾರ್ಜುನ್ ಕಾರ್ಯಕ್ರಮಕ್ಕೆ 10 ಸಾವಿರ ರೂಪಾಯಿಗಳ ದೇಣಿಗೆ ನೀಡುವುದಾಗಿ ಹೇಳಿದರು. ಶ್ರೀ ಮರಳಸಿದ್ದೇಶ್ವರ ರೈತ ಉದ್ಪಾದಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ. ಕೊಟ್ರೇಶ್, ಬಿ ಶಿವಕುಮಾರ ಶ್ರೀಕಂಠಪ್ಪ ಎನ್ ಎಂ ಕೊಟ್ರಯ್ಯ, ಜಂಬಣ್ಣ, ಎಸ್ ವೀರಣ್ಣ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಉಜ್ಜಿನಿ ವಲಯದಲ್ಲಿನ 16 ಶಿಕ್ಷಕ, ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ಉಜ್ಜಿನಿಯಲ್ಲಿ ಸದ್ಧರ್ಮ ಹಿರಿಯ ನಾಗರಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉಜ್ಜಿನಿ ವಲಯಲದ ಶಿಕ್ಷಕ, ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ವರದಿ:- ಎಂ.ಮಲ್ಲಿಕಾರ್ಜುನ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030