ಈ ದಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಸಂಡೂರು ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ದಂಡಾಧಿಕಾರಿಗಳ ಪರವಾಗಿ ಮಾನ್ಯ ಶಿರಸ್ತೇದಾರರಿಗೆ ಪ್ರತಿಭಟನಾ ಮನವಿಯನ್ನ ಸಲ್ಲಿಸಲಾಯಿತು,
ಬೇಡಿಕೆಗಳು
1. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನ 2016 ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಅನ್ವಯಿಸಬಾರದು ಮತ್ತು ಈ ನೇಮಕಾತಿ ನಿಯಮಾವಳಿಗಳು ಪೂರ್ವನ್ವಯವಾಗಿರುವುದನ್ನು ರದ್ದುಪಡಿಸಬೇಕು,
2. ಮೂಲತಃ 1-7/8 ಕ್ಕೆ ನೇಮಕ ಹೊಂದಿದವರನ್ನು ಪಿ ಎಸ್ ಟಿ ಎಂದು ಪದನಾಮ ಮಾಡಿ1-5 ಕ್ಕೆ ಸೀಮಿತಗೊಳಿಸಿರುವುದ ನ್ನು ಹಿಂಪಡೆಯಬೇಕು
3. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಶಿಕ್ಷಕರ ಹಾಗೂ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು
4. ಅರ್ಹ ವಿದ್ಯಾರ್ಹತೆ ಹೊಂದಿದ 2016 ಕ್ಕಿಂತ ಪೂರ್ವ ದಲ್ಲಿ ನೇಮಕಾತಿ ಆಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜೇಷ್ಠತೆಯೊಂದಿಗೆ ಬಡ್ತಿಯನ್ನು ನೀಡುವುದು.
ಇನ್ನೂ ಪ್ರಮುಖವಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಕ್ಷಣಕ್ಕೆ ತಿದ್ದುಪಡಿ ತರುವುದರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ತಮ್ಮಪ್ಪ ಎಲ್ಎಚ್ ಗೌರವ ಅಧ್ಯಕ್ಷರಾದ ಶ್ರೀ ದಕ್ಷಿಣ ಮೂರ್ತಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಮಧುಕುಮಾರಿ ಕೆ. ಎಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ ಆರ್ ಕೊಟ್ರೇಶ್ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮ್ ಚೌಕಳಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷರಾದ ಶ್ರೀ ಷಣ್ಮುಖ ರಾವ್ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅದ್ಯಕ್ಷಿಣಿಯಾದ ಶ್ರೀಮತಿ ಪ್ರೇಮ ಎನ್ಪಿಎಸ್ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಯಳವಾರ್ ಬಡ್ತಿ ಮುಖ್ಯ ಗುರುಗಳ ಸಂಘದ ಶ್ರೀ ಜಂಬಣ್ಣ ಟಿ ಹಾಗೂ ಎಲ್ಲಾ ಸಂಘಗಳ ಪದಾಧಿಕಾರಿಗಳು ಸದಸ್ಯರು ಗೌರವಾನ್ವಿತ ಶಿಕ್ಷಕರು ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು…
ವರದಿ. ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030