ನಾಡಗಡಿಯ ರಕ್ಷಣೆಯಲ್ಲಿ 25 ವರ್ಷಗಳ ಕಾಲ ಸುಧೀರ್ಘ ಸೇವೆ. ” ವೀರಯೋಧ ಮಂಜುನಾಥ್ ಮರಳಿ ಹುಟ್ಟೂರಿಗೆ ” ತಾಲೂಕಿನ ಸುಶೀಲ್ ನಗರ ಗ್ರಾಮದಲ್ಲಿ ತಾಯಿ ಭಾರತಾಂಬೆಯ ಕುಮಾರನಾಗಿ ನಾಡ ಗಡಿಯ ರಕ್ಷಣೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ್ದಾರೆ ಗ್ರಾಮದ ಜನತೆ ಅತ್ಯಂತ ಬಡ ಕುಟುಂಬದ ಮಗನಾಗಿ ಜನಿಸಿ ಚಿಕ್ಕ ವಯಸ್ಸಿನಲ್ಲಿ ದೇಶಭಕ್ತಿ ನಾಡಿನ ಜನತೆಯನ್ನು ನಾಡು ನುಡಿಯನ್ನು ದೇಶಭಕ್ತಿಯ ಕಿಚ್ಚನ್ನು ಬೆಳೆಸಿಕೊಂಡ ಮಂಜುನಾಥ್ ಸರ್ ಇವತ್ತು ಮರಳಿ ನಮ್ಮ ಗ್ರಾಮಕ್ಕೆ ಬರಲಿದ್ದಾರೆ ಗ್ರಾಮದ ಜನತೆಯಲ್ಲಿ ತುಂಬಾ ಸಂತೋಷವಿದೆ ನಮ್ಮ ಗ್ರಾಮದಲ್ಲಿ ಹುಟ್ಟಿ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಿ ದೇಶಕ್ಕೆ ಗುರುತಾಗಿ ಹೊರ ಹೊಮ್ಮಿರುವುದು ನಮ್ಮೆಲ್ಲರ ಸಂತೋಷವಾಗಿದೆ ಎಂದು ಗ್ರಾಮದ ಜನರು ಸಂತೋಷವಾಗಿ ಸ್ವಾಗತಿಸಿದರು,ಮೆರವಣಿಗೆಯೊಂದಿಗೆ ವೀರ ಯೋಧನಿಗೆ ಗ್ರಾಮಸ್ಥರಿಂದಅದ್ದೂರಿ ಸ್ವಾಗತ ಚಿಕ್ಕ ಬಾಲಕನಾಗಿದ್ದಾಗಲೇ ದೇಶವನ್ನು ಕಾಯುವ ಕನಸನ್ನು ಕಂಡ ಬಾಲಕ ತಾಯಿಯನ್ನು ಅಂಗಲಾಚಿ ಬೇಡಿಕೊಂಡು ನಾನು ಈ ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಪ್ರತಿದಿನ ಕೂಡ ಅವರ ತಾಯಿಯನ್ನು ಕೇಳುತ್ತಿದ್ದೇನೆ ಎಂಬುದಾಗಿ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು ದೇಶಕ್ಕೆ ದೊಡ್ಡ ಬೆಳಕಾಗಿ ಬಂದಂತ ಕೆಚ್ಚೆದೆಯ ಕನ್ನಡಿಗ ಗಂಡುಗಲಿ ಎಂದಲ್ಲ ಹೊಗಳಿ ಅವರಿಗೆ ಅದ್ದೂರಿ ಸ್ವಾಗತವನ್ನು ಮಾಡಿ ಸನ್ಮಾನವನ್ನು ಮಾಡಿದ್ದಾರೆ ತಂಡೂರಿನಿಂದ ಮೆರವಣಿಗೆ ಪ್ರಾರಂಭವಾಗಿದ್ದು ಸುಶೀಲ್ ನಗರ ಗ್ರಾಮದಲ್ಲಿ ಹುಟ್ಟೂರಿನಲ್ಲಿ ಅವರನ್ನು ನೋಡಲು ಜನ ಜಾತ್ರೆ ನಡೆಯುತ್ತದೆ ಏನೋ ಅನ್ನುವ ರೀತಿ ಮುಗಿಬಿದ್ದಿದ್ದರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030