ಬೊಮ್ಮಲಗುಂಡ ಗ್ರಾಮದಲ್ಲಿ ಗ್ರಾಮದ ಯುವಕರ ಬಳಗದಿಂದ ಗಣೇಶ ಚತುರ್ಥಿ ಆಚರಣೆ.. ಸಂಡೂರು ತಾಲೂಕಿನ ಕೊನೆಯ ಭಾಗದಲ್ಲಿ ಹಳ್ಳಿ ಇದಾಗಿದೆ 80 ಮನೆಗಳನ್ನು 80 ಕುಟುಂಬಗಳನ್ನ ಹೊಂದಿರ್ತಕಂತ ಗ್ರಾಮದಲ್ಲಿ ಗ್ರಾಮ್ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರು ಹೊಂದಿದ್ದು ಶಿಕ್ಷಣ ಅಭಿವೃದ್ಧಿಯಲ್ಲಿ ಮೂರರಿಂದ ನಾಲ್ಕು ಜನ ನೌಕರಸ್ಥರು ಹಾಗೂ ಕಬಡ್ಡಿಯಂದಾಕ್ಷಣ ನೆನಪಾಗುವ ಬೊಮ್ಮಲಗುಂಡ ಗ್ರಾಮದ ಯುವಕರು ಎಂಬ ಹೆಗ್ಗಳಿಕೆಗೆ ಪಾತ್ರವಾದಂತ ಪ್ರೀತಿ ವಿಶ್ವಾಸ ಸಂಸ್ಕೃತಿ ಯನ್ನು ಹೊಂದಿರ್ತಕ್ಕಂತ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯನ್ನು ಆಚರಣೆ ಮಾಡಿದ್ದಾರೆ ಈ ಒಂದು ಪುಟ್ಟ ಹಳ್ಳಿಯಲ್ಲಿ ಆ ಗಣೇಶನ ಆಶೀರ್ವಾದದಿಂದ ಅನೇಕ ಮಕ್ಕಳು ವಿದ್ಯಾಂತರಾಗಿದ್ದಾರೆ ಇದಕ್ಕೆಲ್ಲ ಕಾರಣ ಆ ಯುವಕರಲ್ಲಿ ಶಿಕ್ಷಣವೆಂಬ ಬೀಜವನ್ನು ಬಿತ್ತಿ ಹೋದಂತ ಮುಖ್ಯ ಗುರುಗಳಾದಂತ ಕೊಟ್ರೇಶ್ ಕೆ ಇವರು 1985 ರಲ್ಲಿ ಆ ಕುಗ್ಗ ಗ್ರಾಮಕ್ಕೆ ಶಿಕ್ಷಕರಾಗಿ ಬಂದು ಸುಮಾರ್ 10 ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯ ಗುರುಗಳಾಗಿ ಸೇವೆಯನ್ನು ಮಾಡಿ ಶಿಕ್ಷಣದ ಭದ್ರಬುನಾದಿಯನ್ನ ಮಕ್ಕಳಲ್ಲಿ ಮತ್ತು ಊರಿನ ಗ್ರಾಮಸ್ಥರಲ್ಲಿ ಕಟ್ಟಿಹೋಗಿದ್ದಾರೆ ಎಂದು ಗ್ರಾಮದ ಯುವಕರು ಗಣೇಶ ಹಬ್ಬದ ದಿನದಂದು ಕೊಟ್ರೇಶ್ ಕೆ ಇವರನ್ನು ಪುನ ಸ್ಮರಣೆ ಮಾಡಿಕೊಂಡಿದ್ದಾರೆ.
ವರದಿ,ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030