ಜೆಸ್ಕಾಂ ಶಾಖಾಧಿಕಾರಿಗಳ ನಿರ್ಲಕ್ಷ್ಯ ಪೋತ್ನಾಳ ಜನರಿಗೆ ಪ್ರಾಣ ಸಂಕಟ.
ಮಾನವಿ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ Keb ಅಧಿಕಾರಿಗಳ ನಿರ್ಲಕ್ಷದಿಂದಲೆ ಈ ಮೇಕೆ ಸಾವು R.ಅಮರೇಶ್ ನಾಯಕ ಆರೋಪ ..
ಯಾವುದೇ ಸುರಕ್ಷತೆ ಇಲ್ಲದೆ ಚಿಕಲಪರ್ವಿ ರೋಡ್ ಗೆ ಟಿಸಿ ಹಾಕಿರುವುದರಿಂದ ನಾಲ್ಕೈದು ಮೇಕೆಗಳು ಹಾಗು ಈ ಹಿಂದೆ ಎಮ್ಮೆ ಕೂಡ ಸಾವನಪ್ಪಿದೆ ..ಸಣ್ಣ ಹುಡುಗರು ಆಟವಾಡುತ್ತ ಬಂದು ಇದನ್ನ ಇಡದರೆ ಇದಕ್ಕೆ ಯಾರು ಹೊಣೆ ಎಂದು ಪೋತ್ನಾಳ ಗ್ರಾಮದ ಜನರು ಆಕ್ರೋಷ ವ್ಯಕ್ತ ಪಡಿಸಿದರು .ಸಂಬಂದಪಟ್ಟ ಮೇಲಾಧಿಕಾರಿಗಳು ಇತ್ತಕಡೆ ಗಮನಹರಿಸಿ ಸುರಕ್ಷಿತ ಕ್ರಮಗಳನ್ನ ಕೈಗೊಳ್ಳಬೇಕು ಅಲ್ಲದೆ ಇತ್ತ ಎಮ್ಮೆ ಹಾಗು ಮೆಕೆಗಳನ್ನು ಕಳೆದುಕೊಂಡ ರೈತರಿಗೆ ಕೆಇಬಿ ಕಡೆಯಿಂದ ಪರಿಹಾರ ನೀಡಬೇಕು ಎಂದು ಮೇಕೆ ಕಳೆದುಕೊಂಡ ರೈತರು ಆಕ್ರೋಷ ವ್ಯಕ ಪಡಿಸಿದರು..ಅನೇಕ ಸಲ KEB ಅವರಿಗೆ ಮನವಿ ಮಾಡಿಕೊಂಡ್ರು ಅವರು ಮನವಿಗೆ ಸ್ಪಂದಿಸುವ ಕಾರ್ಯ ಮಾಡ್ತಿಲ್ಲ ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ,ರಸ್ತಗಳಲ್ಲಿ ವಿದ್ಯುತ್ ಪರವರ್ತಕಗಳಿಗೆ ರಕ್ಷಣಾ ಬೇಲಿ ಅಳವಡಿಸಿಲ್ಲ ಮಕ್ಕಳು ಮುಟ್ಟಿ ಪ್ರಾಣ ಕಳೆದುಕೊಳ್ಳುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ವಹಿಸಿ ಎಂದು R.ಅಮರೇಶ್ ನಾಯಕ ಹಾಗು ಗ್ರಾಮದ ಜನರು ದೂರಿದ್ದಾರೆ…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030