ಮಹಾಲಕ್ಷ್ಮಿ ಬಡಾವಣೆಯಲ್ಲಿ ಮನೆ ಬಾಗಿಲು ಮುರಿದು ದುಷ್ಕರ್ಮಿಗಳಿಂದ ಮನೆ ಕಳ್ಳತನ…!!!

Listen to this article

ರಾಯಚೂರು
ನಿನ್ನೆ ತಡರಾತ್ರಿ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮನೆ ಬಾಗಿಲು ಮುರಿದು ದುಷ್ಕರ್ಮಿಗಳು ಮನೆಲ್ಲಿದ್ದವರನ್ನು ಕಟ್ಟಿಹಾಕಿ ಚಿನ್ನಾಭರಣ ಹಾಗೂ 2, ಲಕ್ಷ ನಗದು ದೋಚಿದ್ದಾರೆ ನಗರದ ಮಹಾಲಕ್ಷ್ಮಿ ಬಡಾವಣೆಯ ಬಸನಗೌಡ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದಾರೆ…
ಚಾಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು 22 ತೊಲೆ ಚಿನ್ನ ಎರಡು ಕೆಜಿ ಬೆಳ್ಳಿ ಹಾಗೂ ಎರಡು ಲಕ್ಷ ನಗದು ದರೋಡೆ ಮಾಡಿದ್ದಾರೆ ದರುಡೆಕೋರರ ಗ್ಯಾಂಗ್ ಮುಖಕ್ಕೆ ಕಪ್ಪು ಬಟ್ಟೆ ಧರಸಿ ದರೋಡೆ ಮಾಡುವ ಮೊದಲು ಅಕ್ಕಪಕ್ಕದ ಮನೆಗಳನ್ನು ಹೊರಗಿನಿಂದ ಲಾ ಕ್ ಮಾಡಿದ್ದಾರೆ ಹಾಗೂ ಮನೆಗಳ ಮುಂದಿನ ಲೈಟ್ ಹಾಗೂ ಬೀದಿ ದೀಪಗಳನ್ನು ಆಫ್ ಮಾಡಿದ್ದಾರೆ ದರೋಡೆಕೋರ ಈ ಕೃತ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡೌಡಾಯಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪುಟ್ಟ ಮಾದಯ್ಯ ನವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಪಶ್ಚಿಮ ಠಾಣೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಂಡದಿಂದ ಶೋಧ ಕಾರ್ಯ ನಡೆದಿದ್ದು ಆದಷ್ಟು ಬೇಗ ದರೋಡೆಕೋರರನ್ನು ಸೆರೆ ಹಿಡಿಯುವುದಾಗಿ ಹೇಳಿದ್ದಾರೆ ಈ ಘಟನೆಯಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ…

ವರದಿ. ನಾಗರಾಜ್, ವಿ, ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend