ಜೀನೂರು ಸೇತುವೆ ಕುಸಿತ ಪ್ರತಿದಿನವೂ ಬೆಳಿಗ್ಗೆ ಯುಕೆಜಿ ಇಂದ ಹಿಡಿದು ಪಿಯು ವರೆಗೆ ನೂರಾರು ವಿದ್ಯಾರ್ಥಿಗಳು.. ಹತ್ತಾರು ಹಳ್ಳಿಗಳಾದ.. (ತಡಕಲ್ ದೋತರಬಂಡಿ ಉಟಕನೂರು ಬೆಳವಾಟ ಮರಕಂದಿನ್ನಿ ಮಲ್ಕಾಪುರ ಉದ್ಬಾಳ).. ಪ್ರತಿದಿನವೂ ಬಿತ್ತನೆ ಬೀಜ ಗೊಬ್ಬರ ತರುವ ಹಳ್ಳಿಗಳ ರೈತರು… ಪ್ರತಿದಿನವೂ ಈ ಭಾಗದ ಹಳ್ಳಿಗಳಿಗೆ ಬರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು.. ಈ ಭಾಗದ ಹಳ್ಳಿಗಳಿಗೆ ಪ್ರತಿನಿತ್ಯ ಬರುವ ಸರಕಾರಿ ಬಸ್ ಮತ್ತು ಖಾಸಗಿ ಶಾಲೆಯ ಮಿನಿ ಬಸ್ಸುಗಳು.. ಈ ಭಾಗಕ್ಕೆ ಗೊಬ್ಬರ ಸರಕುಗಳನ್ನ ತರುವ ಲಾರಿಗಳು ಇವುಗಳು ಸಂಚರಿಸದೆ ಇನ್ನು ಹತ್ತಾರು ಸಮಸ್ಯೆಗಳನ್ನ ಸೃಷ್ಟಿ ಮಾಡಿರುವ ಈ ಶಿಥಿಲಾವಸ್ಥೆಯಲ್ಲಿರುವ ಬ್ರಿಡ್ಜ್.. ಈ ಭಾಗದ ಎಲ್ಲರಿಗೂ ಜೀವ ಭಯದಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.. ಈ ಬ್ರಿಡ್ಜ್ ಯಾವಾಗ ಬೀಳುತ್ತೋ ಎನ್ನುವ ಆತಂಕ ಎಲ್ಲರಲ್ಲೂ ಮೂಡಿದೆ.. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಈ ಭಾಗದ ಮುಖಂಡರು ಗಮನಹರಿಸಬೇಕೆಂದು ಒತ್ತಾಯಿಸಿದರು.ಈ ಸಂಧರ್ಭದಲ್ಲಿ ತಡಕಲ್ ಗ್ರಾಮದ ಯುವ ಮುಖಂಡರಾದ ದುರುಗಪ್ಪ ತಡಕಲ್ ಮತ್ತು ಗ್ರಾಮದ ಜನರು ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು…
ವರದಿ. ಲಿಂಗರಾಜು ತಡಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030