ಕೃಷಿ ಇಲಾಖೆ; ಎಲೆಗಳು ಹಳದಿಗೆ ಸಲಹೆ
ರಾಯಚೂರು,:- ಜಿಲ್ಲೆಯ ಸಾಲಿನ ಸತತವಾಗಿ ಆಗುತ್ತಿರುವ ಮಳೆಯಿಂದ ಭೂಮಿಯಲ್ಲಿ ಅತಿಯಾದ ತೇವಾಂಶದಿoದಾಗಿ ಬೇರುಗಳ ಉಸಿರಾಟದಲ್ಲಿ ವ್ಯತ್ಯಯವಾಗಿ ಹಾಗೂ ಪೋಷಕಾಂಶಗಳ ಅತಿಯಾದ ಸೋರಿಕೆಯಿಂದಾಗಿ ಎಲೆಗಳು ಹಳದಿಯಾಗುವ ಲಕ್ಷಣಗಳು ಕಂಡುಬರುತ್ತವೆ. ಈ ಸಮಸ್ಯೆಯ ನಿರ್ವಹಣಾ ಕ್ರಮಗಳನ್ನು ಅಗತ್ಯ ಕೈಗೊಳ್ಳುವಂತೆ ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ಅವರು ಕೋರಿದ್ದಾರೆ.
ಅತಿಯಾದ ತೇವಾಂಶ ನಿರ್ವಹಣಾ ಕ್ರಮಗಳು: ಹೊಲದ ಸುತ್ತಲು 1 ಅಡಿ ಆಳದ ತಗ್ಗು ತಗೆದು ನೀರನ್ನು ಹೊರಹಾಕಿ ಜೊತೆಗೆ ಹೊಲದಲ್ಲಿ ಪ್ರತಿ 10 ಮೀಟರ್ ಅಂತರದಲ್ಲಿ ಒಂದರoತೆ 1 ಅಡಿ ಆಳದ ನೇಗಿಲ ಸಾಲು ತಗೆದು ನೀರು ಹೊರಹಾಕಿ. ನೀರಿನಲ್ಲಿ ಕರಗುವ 19:19:19 ಓPಏ @ 10ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬoಧಿಸಿದ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸುವoತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ವರದಿ. ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030