ಗಣೇಶೋತ್ಸವ: ತಿಪ್ಪಾಪೇಟೆಯ ಸಂಗಮೇಶ್ವರ ನಾಟ್ಯ ಸಂಘದ ವತಿಯಿಂದ ಅನ್ನಸಂತರ್ಪಣೆ…
ಗುಳೇದಗುಡ್ಡ: ಗಣೇಶೋತ್ಸವದ ಅಂಗವಾಗಿ ಪಟ್ಟಣದ ತಿಪ್ಪಾಪೇಟೆಯ ಬಸವಣ್ಣ ದೇವಸ್ಥಾನದಲ್ಲಿ ಸಂಗಮೇಶ್ವರ ನಾಟ್ಯ ಸಂಘದ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ನಿನ್ನ ಗುರುವಾರ ರಾತ್ರಿ ಸಾರ್ವಜನಿಕರಿಗೆ ಅನ್ನಸಂರ್ತಣೆ ಹಮ್ಮಿಕೊಳ್ಳಲಾಗಿತ್ತು. ಸುಮಾರು ಐದು ನೂರಕ್ಕೂ ಹೆಚ್ಚು ಜನರು ಶ್ರೀ ಗಣೇಶ ಪ್ರಸಾದ ಸೇವಿಸಿದರು. ಸಂಗಮೇಶ್ವರ ನಾಟ್ಯ ಸಂಘ ಮ್ಯಾಳದ ಗುರು ಹಿರಿಯರು ಆದಂತಹಾ ಈರಬಸಪ್ಪ ತಿಪ್ಪಾ ,ಸಂಗನಬಸಪ್ಪ ಮಾಮನಿ , ಚನ್ನಪ್ಪ ಚಿಂದಿ , ಅಶೋಕ್ ರೋಜಿ, ಮಹದೇವಪ್ಪ ಹುನಗುಂದ, ಶೇಕರಪ್ಪ ಆರುಟಗಿ, ವಿಶ್ವನಾಥ ತಿಪ್ಪಾ,ವಿರೂಪಾಕ್ಷಪ್ಪ ಅರುಟಗಿ, ಸಂಗಮೇಶ ಹುನಗುಂದ, ಆನಂದ್ ತಿಪ್ಪಾ, ಮುರುಗೇಶ ರಾಜನಾಳ್, ಮುಪ್ಪಣ್ಣಪ್ಪ ಶೀಲವಂತ, ಬಸವರಾಜ ರಾಜನಾಳ್, ರಾಜು ಹರ್ತಿ, ಮಂಜುನಾಥ್ ಅರುಟಗಿ, ಸಂತೋಷ ತಿಪ್ಪಾ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030