ಮಕ್ಕಳ ಪ್ರತಿಭೆಗೆ ಪ್ರತಿಭಾಕಾರಂಜಿ ಪೂರಕ ಕಾರ್ಯಕ್ರಮ…!!!

Listen to this article

ಮಕ್ಕಳ ಪ್ರತಿಭೆಗೆ ಪ್ರತಿಭಾಕಾರಂಜಿ ಪೂರಕ
ಗುಳೇದಗುಡ್ಡ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಪ್ರೊತ್ಸಾಹ ನೀಡಬೇಕು. ಪ್ರತಿಯೊಬ್ಬ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಪೂರಕ ವೇದಿಕೆ ಕಲ್ಪಿಸುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮಾನಸಿಕ, ದೈಹಿಕ ಕಾರ್ಯ ಚಟುವಟಿಕೆಗಳು ಕೂಡಾ ಅವಶ್ಯವಾಗಿವೆ ಎಂದು ಮಾಹೇಶ್ವರಿ ವಿದ್ಯಾ ಪ್ರಚಾರಕ ಮಂಡಳದ ಚೇರಮನ್ ಕಮಲಕಿಶೋರ ಮಾಲಪಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ವೆಂಕಟೇಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗುಳೇದಗುಡ್ಡ ಪಶ್ಚಿಮ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಆದರ್ಶ ಭವಿಷ್ಯ ರೂಪಗೊಳ್ಳಲು ಶಿಕ್ಷಣದೊಂದಿಗೆ ಮಕ್ಕಳಲ್ಲಿನ ಸೂಕ್ತ ಪ್ರತಿಭೆ ಅನಾವರಣಕ್ಕೆ ಪಾಲಕರು ಸಹಕಾರ ನೀಡಬೇಕೆಂದರು.
ಶಿಕ್ಷಣ ಸಂಯೋಜಕ ಎಸ್.ಬಿ.ನಾಲತವಾಡ, ಬಿ.ಆರ್.ಪಿ.ಸಂಗಮೇಶ ಯಲಿಗಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಆರ್‍ಪಿ ಭೀಮೇಶ ಕುಂಬಾರ, ಸಿಆರ್‍ಪಿ ರಾಮಚಂದ್ರ ಬಾಪಟ್, ಭಾಗೀರತಿ ಆಲೂರ, ಜಗದೀಶ ಬುಳ್ಳಾ, ಸಂಸ್ಥೆ ನಿರ್ದೇಶಕರಾದ ಪುರುಷೋತ್ತಮ ರಾಠಿ, ಶ್ರೀಕಾಂತ ಸೋನಿ, ಲತಾಬಾಯಿ ತಾಪಡಿಯಾ, ಶಾಲೆ ಮುಖ್ಯ ಶಿಕ್ಷಕ ಆರ್.ಪಿ.ಪಾಟೀಲ ಇತರರು ಇದ್ದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡು ಛದ್ಮವೇಷ, ಲಘು ಸಂಗೀತ, ಗೀತ ಗಾಯನ, ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend