ಚಳ್ಳಕೆರೆಯ ಶಾಸಕರು ಅದ ಟಿ ರಘುಮೂರ್ತಿ ಯವರು ಹಾಗೂ ಶ್ರೀ ಡಾ.ಬಿ.ಯೋಗೇಶ್ ಬಾಬು ವೀರೇಂದ್ರ (ಪಪ್ಪಿ) ಚಿತ್ರದುರ್ಗ ಜಿಲ್ಲಾ ಶಾಸಕರು ಹಾಗು ಕೆಪಿಸಿಸಿ ಸದಸ್ಯರು ಇಂದು ಚಿತ್ರದುರ್ಗ ಜಿಲ್ಲೆ ಕಚೇರಿ ಎದುರು ರಾಜ್ಯಪಾಲರ ನಡೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಕರ್ನಾಟಕದ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ವಿರುದ್ಧ ಪ್ರಾಸಿಕ್ಯೂಷಿನ್ ಗೆ ಅನುಮತಿ ನೀಡಿದ್ದು ರಾಜ್ಯಪಾಲರ ಈ ನಡೆಯನ್ನು ಖಂಡಿಸಿ
ಚಿತ್ರದುರ್ಗ ನಗರದ ಗಾಂಧಿ ಸರ್ಕಲ್ ನಿಂದ ಮಾನ್ಯ ಜಿಲ್ಲಾಧಿಕಾರಿ ಕಛೇರಿಯ ವರೆಗೆ
ಬೃಹತ್ ಪ್ರತಿಭಟನೆಯಲ್ಲಿ ಶ್ರೀಯುತ ಡಾ.ಬಿ.ಯೋಗೇಶ್ ಬಾಬು ಅಧ್ಯಕ್ಷರು ದ್ರಾಕ್ಷಿ ಮತ್ತು ವೈನ್ ಮಂಡಳಿ ಚಳ್ಳಕೆರೆಯ ಶಾಸಕರು ಆದ ಟಿ ರಘುಮೂರ್ತಿ ಇವರು ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಗು ಜಿಲ್ಲಾ ಸಚಿವರ ಜೊತೆ ಪಾಲ್ಗೊಂಡು ರಾಜ್ಯಪಾಲರ ಈ ನಡೆಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು, ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು…
ವರದಿ. ಶಶಿಕುಮಾರ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030