ಸಿಡಿಲ ಸಂತ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ ಅಧ್ಯಕ್ಷರಾದ ಚಲ್ಮೇಶ್ ಇವರಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಹಾಗೂ ಪ್ರತಿ ಮಗುವಿಗೆ ಒಂದು ಗಿಡವನ್ನು ನೀಡಿ ಅ ಗಿಡಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ರಾಮಾಯಣ ಮಹಾಭಾರತ ಬರುವ ಹೆಸರು ಇಟ್ಟು ಯಾರು ಗಿಡಗಳನ್ನು ಉತ್ತಮವಾಗಿ ಬೆಳೆಸುತ್ತಾರೆ ಅವರಿಗೆ ಮುಂದಿನ ವರ್ಷ ಬಹುಮಾನ ನೀಡಲಾಗುವುದು .ಎಂದು ಮಕ್ಕಳಿಗೆ ತಿಳಿಸಲಾಯಿತು.ನಮ್ಮ ಸಂಸ್ಥೆಯಿಂದ 1000ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು ಮತ್ಸಮುದ್ರ ಹಾಲಿಗೊಂಡನಹಳ್ಳಿ ಚಟ್ಟೇಕಂಬ ಪುರ್ಲೆಹಳ್ಳಿ ಚೆನ್ನಮ್ಮ ನಾಗತಿಹಳ್ಳಿ ರಾಜೀವ್ ನಗರ ಕರೀಕೆರೆ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗ್ರಾಮದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ಇನ್ನು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತೇವೆ.(ನೋಟ್ ಪುಸ್ತಕ ದಾನಿಗಳು ಮಾರುತಿ ಮೆಡಿಕಲ್ ವಿಜಯನಗರ)
ಈ ಒಂದು ಕಾರ್ಯಕ್ರಮದಲ್ಲಿ ಬಾಗವಹಿಸಿ ಸಹಕರಿಸಿದ ನಮ್ಮ ಸಂಸ್ಥೆಯ ಸ್ವಯಂ ಸೇವಕರಾದ ಮಂಜುನಾಥ.ಸಿ ಸೋಮಶೇಖರ್.ಮಂಜುನಾಥ ಜೋಷಿ ಪರಮೇಶ್ವರ ಆರ್ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಸಹಶಿಕ್ಷಕರು SDMCಸದಸ್ಯರು ಉಪಸ್ಥಿತರಿದ್ದರು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030