ನಿಂಬಳಗೇರೆ:- 78ನೇ ಸ್ವತಂತ್ರೋತ್ಸವ ಆಚರಣೆ
ಕೊಟ್ಟೂರು ತಾಲೂಕಿನ ಸಮೀಪದ ನಿಂಬಳಗೆರೆ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ಕಾರ್ಯಕ್ರಮವನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ ಪಡೆಯಲು ಶ್ರಮಿಸಿದ ರಾಷ್ಟ್ರೀಯ ನಾಯಕರುಗಳು ಹಾಗೂ ಸ್ವತಂತ್ರ ನಂತರ ದೇಶದ ಅಭಿವೃದ್ಧಿಗೆ ಕಾರಣಿ ಕರ್ತರಾದ ದೇಶ ಕಾಯುವ ಯೋಧ ಅನ್ನ ನೀಡುವ ರೈತರು ದೇಶದ ಅಭಿವೃದ್ಧಿಗೆ ಅಬ್ದುಲ್ ಕಲಾಂ ರಂತಹ ವಿಜ್ಞಾನಿಗಳ ಕೊಡುಗೆ ಇತ್ಯಾದಿ ಮಹಾನ್ ನಾಯಕರುಗಳ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ನಿಂಬಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಮಹಾಂತೇಶ್ ನೆರವೇರಿಸಿದರೆ ಮುಖ್ಯ ಅತಿಥಿಗಳಾಗಿ ನಿಂಬಳಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಎನ್ ಜಿ ಮಲ್ಲಿಕಾರ್ಜುನ ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷರಾದ ಎನ್ ಜಿ ಚನ್ನಬಸವನಗೌಡ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಮಂಗಳಮ್ಮ ಹಾಗೂ ನಿಂಬಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣಗಟ್ಟೆ, ಮಂಗಾಪುರ, ಬೆಳದೇರಿ ,ನಾಗೇನಹಳ್ಳಿ, ಸರ್ವ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಪೋಷಕ ವರ್ಗದವರು ಭಾಗವಹಿಸಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಎಸ್ ಈರಣ್ಣ. ಅವರು ಕೇದ್ರ ಬಿಂದು ಅಗಿ ಯಶಸ್ವಿಗೊಳಿಸಿದರು…
ವರದಿ. ಶಿವಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030