ಕೊಟ್ಟ ಮಾತಿನಂತೆ ಭಾವನೆಗಳಿಗೆ ಸ್ಪಂದಿಸಿ ಉಜ್ಜಿನ ಗ್ರಾಮದ ಅಭಿವೃದ್ಧಿಗೆ ಪಣತೊಟ್ಟಿರುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಉಜ್ಜಿನಿ ಗ್ರಾಮದ ನಿಂಬಳಗೆರೆ ಹೋಗುವ ಮುಖ್ಯ ರಸ್ತೆಯಿಂದ ಮಸೀದಿ ವರೆಗೆ ಸಿ. ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ನಿರ್ಮಾಣ ( 100.00 ಲಕ್ಷಗಳು), ಹಾಗೂ 2023- 24 ನೇ ಸಾಲಿನ ಕೆ.ಕೆ. ಆರ್. ಡಿ. ಬಿ. ಕ್ರಿಯಾ ಯೋಜನೆ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿ ನಿರ್ಮಾಣ ( 476.99), ಉಜ್ಜಿನಿಯಿಂದ ಕೂಡ್ಲಿಗಿ ಮುಖ್ಯ ರಸ್ತೆ ನಿರ್ಮಾಣ( SHDP, PWD, 20.00 ಕೋಟಿ)ಭೂಮಿಪೂಜೆಯನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿದ ಬಳಿಕ ಮಾತನಾಡಿ, ಕೊಟ್ಟ ಮಾತು ಉಳಿಸಿಕೊಳ್ಳುವ ಮತ್ತು ಪ್ರಾದೇಶಿಕವಾಗಿ ಜನರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ತಾರತಮ್ಯ ಮಾಡದೇ ಅಭಿವೃದ್ಧಿಯಿಂದ ವಂಚಿತವಾದ ಉಜ್ಜಿನಿ ಭಾಗದ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮರ್ಥ ರೀತಿಯಲ್ಲಿ ಒತ್ತು ಕೊಡುತ್ತೇನೆ ಎಂದರು. ತುಂಬಾ ವರ್ಷಗಳಿಂದ ಉಜ್ಜಿನಿ ಮತ್ತು ಕೂಡ್ಲಿಗಿ ನಡುವಿನ ರಸ್ತೆಯೂ ನೆನೆಗುದಿಗೆ ಬಿದ್ದಿರುವುದನ್ನು ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀಯುತ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದು ಅಭಿವೃದ್ಧಿಗೆ ಒತ್ತು ಕೊಡಲಾಯಿತು ಎಂದೂ ತಿಳಿಸಿದರು.
ಸೊಕ್ಕೆ – ತೂಲಹಳ್ಳಿ, ಜೋಳದ ಕೂಡ್ಲಿಗಿ – ನಾಗರಕಟ್ಟೆ, ಹನುಮನಹಳ್ಳಿ ಭಾಗದ ಬಹುತೇಕ ರಸ್ತೆಗಳನ್ನು ಮುಂದಿನ ವರ್ಷದ ಒಳಗೆ ಪೂರೈಸುತ್ತೇವೆ ಎಂದರು.
ಕೆರೆ ತುಂಬಿಸುವ ಕಾಮಗಾರಿ ಮುಗಿಯುವ ಹಂತದಲ್ಲಿದ್ದೂ, ರೈತರ ಬೇಡಿಕೆಯನ್ನು ಪೂರೈಸುವೆ ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ, ಮಾಜಿ ತಾ. ಪಂ. ಸದಸ್ಯರಾದ ರಂಗಪ್ಪ ಹಾಗೂ ಶಾಂತನಗೌಡ ಅವರು, ಉಜ್ಜಿನಿ ಗ್ರಾ. ಪಂ. ಅಧ್ಯಕ್ಷರಾದ ನಿಂಗಮ್ಮ, ಗ್ರಾ. ಪಂ. ಸರ್ವ ಸದಸ್ಯರು, ಮುಖಂಡರಾದ ರಾಜಣ್ಣ, ಚಂದ್ರಣ್ಣ, ಗುತ್ತಿಗೆದಾರರು, ಅಧಿಕಾರಿಗಳು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ.ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030