ಡಾ. ವಿಷ್ಣುವರ್ಧನ್ ರವರು ಅಭಿಮಾನಿಗಳ ಮನದಲ್ಲಿ ಎಂದಿಗೂ ಜೀವಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಸಿ. ಚೇತನ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದ ಜೇಡರ ದಾಸಿಮಯ್ಯ ವೃತ್ತದ ಬಳಿ ಡಾ. ವಿಷ್ಣುವರ್ಧನ್ ಅವರ 74ನೇ ವರ್ಷದ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸುವುದರ ಮೂಲಕ ಮತ್ತು ಹಣ್ಣುಗಳನ್ನು ಹಂಚಿದರು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎ.ಸಿ.ಚೇತನ್ ಮಾತನಾಡಿ ಕನ್ನಡ ಚಿತ್ರರಂಗ ಕಂಡ ಮೇರು ನಟ ತಮ್ಮ ಕಲಾವಂತಿಕೆ ಮತ್ತು ವ್ಯಕ್ತಿಗಳಿಂದ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡು ಕರುನಾಡಿನ ಜಮೀನ್ದಾರ, ಸಾಹಸಸಿಂಹ, ವಂಶವೃಕ್ಷ, ಆಪ್ತಮಿತ್ರ, ಯಜಮಾನ, ಬೂತಯ್ಯನ ಮಗ ಅಯ್ಯು,ಮುತ್ತಿನ ಹಾರ, ಸೂರಪ್ಪ, ದಿಗ್ಗಜರು, ಸೇರಿದಂತೆ ಅನೇಕ ಚಲನಚಿತ್ರಗಳನ್ನು ನಟಿಸಿದ್ದಾರೆ. ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು,
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸಿ ಚೇತನ್, ನಾಗೇಶ್ ಎಸ್ ಕೆ, ನಾಗೇಶ್ ಎನ್ಎಂ, ಎಟಿ,ಬಸವರಾಜ್, ಡಿಕೆ ಶ್ರೀಧರ,ವೀರೇಶ್,ಬಾಬು, ಚಂದನ್, ಜಾಕಿ ಶಿವರಾಂ, ಅನಿಲ್, ಹಣ್ಣು ಹಂಚುವುದರ ಮೂಲಕ ಸಂಭ್ರಮಿಸಿದರು ,
ಸೇರಿದಂತೆ ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳು, ಯುವಕರು ಸೇರಿದಂತೆ ಸಾರ್ವಜನಿಕ ರೈತರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030