ಸರ್ವ ಜನಾಂಗಕ್ಕೆ ಸಲ್ಲುವ ಗಣನಾಯಕ ; ನಮ್ಮ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಪಥದ ದಿಕ್ಕನ್ನೂ ಬದಲಾಯಿಸಲು ಸಹಕಾರ ಕೊಡಿ. ಶಾಸಕ – ಡಾ. ಶ್ರೀನಿವಾಸ್. ಎನ್. ಟಿ..
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಟ್ಟಣದಲ್ಲಿ ದಿ; 07-09-24 ರಂದು ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಯೊಂದು ಓಣಿ – ಕೇರಿ ಸುತ್ತಿ ಸ್ಥಳೀಯ ಮುಖಂಡರು, ಗಣ್ಯರು ಮತ್ತು ಯುವಕರೊಂದಿಗೆ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಕ್ಷೇತ್ರದ ಜನರಿಗೆ ಒಳ್ಳೆಯ ಮಳೆ ಬೆಳೆ ಬಂದು ಆರೋಗ್ಯ, ಸುಖ, ಸಂತೋಷದಿಂದ ಬಾಳಲಿ ಎಂದೂ ಪ್ರಾರ್ಥಿಸಿದರು*. ನಮ್ಮಲ್ಲಿ ಗಣಪತಿ ದೈವವೂ ಯಾವುದೇ ತಾರತಮ್ಯ ಇಲ್ಲದೇ ಸರ್ವ ಜನಾಂಗಕ್ಕೆ ಸಲ್ಲುವಂತಹ ಗಣನಾಯಕ ಎನಿಸಿಕೊಂಡಿದ್ದಾನೆ ಎಂದರು. *ನಾವು ಎಲ್ಲರೂ ಗಣಪತಿಯ ಕೃಪೆಗೆ ಪಾತ್ರರಾಗಿ ಸಹೋದರರಾಗಿ ಅನೋನ್ಯವಾಗಿ ಜೀವಿಸುತ್ತಾ ನಮ್ಮ ಕ್ಷೇತ್ರದ ಅಭಿವೃದ್ಧಿ ಪಥದ ದಿಕ್ಕನ್ನೇ ಬದಲಿಸಲು ನೀವು ಎಲ್ಲರೂ ಒಗ್ಗಟ್ಟಿನಿಂದ ನನಗೆ ಸಹಕಾರ ಕೊಡಿ ಎಂದರು*. ಪ್ರತಿಯೊಂದು ವಾಡ್೯ನಲ್ಲಿ ಸಾಮೂಹಿಕ ಶೌಚಾಲಯ ಕೊರತೆ ಮತ್ತು ಒಳಚರಂಡಿ ಸಮಸ್ಯೆ ನನ್ನ ಗಮನಕ್ಕೆ ಇದೆ. ಸಧ್ಯದಲ್ಲಿ ಅವುಗಳನ್ನು ಒದಗಿಸಿಕೊಡುವ ಜೊತೆಗೆ
ಮುಂದಿನ ದಿನಗಳಲ್ಲಿ ಯಜಮಾನರು, ಮುಖಂಡರು ಮತ್ತು ಪ. ಪಂ. ಜನಪ್ರತಿನಿಧಿಗಳೊಂದಿಗೆ ಕುಂದುಕೊರತೆಗಳನ್ನು ಸಮೀಕ್ಷೆ ಮಾಡಿ ಸರ್ವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದೂ ನೆರದ ಜನರಿಗೆ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಪ. ಪಂ. ಸದಸ್ಯರಾದ ದಾಣಿ ಚೌಡಮ್ಮ, ಜಯಮ್ಮನವರ ರಾಘು, ಮುಖಂಡರಾದ ಬಂಗಾರು ಹನುಮಂತ, ದಾಣಿ ರಾಘು, ಸುರೇಶ್ ಎಸ್, ಈಶಪ್ಪ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030