ಆತಂಕ ಸ್ಥಿತಿಯಲ್ಲಿ ಸಿಡೆಗಲ್ಲು ಜನ; ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸುವೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…
ಕೂಡ್ಲಿಗಿ ಕ್ಷೇತ್ರದ ಸಿಡೆಗಲ್ಲು ಗ್ರಾಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 04-09-24 ರಂದು ಸಿ.ಸಿ. ರಸ್ತೆ ಭೂಮಿಪೂಜೆ ನೆರವೇರಿಸಿದರು. ಶಾಸಕರು, ಸಿಡೆಗಲ್ಲು ಗ್ರಾಮದ ಕುಂದುಕೊರತೆಗಳನ್ನು ಆಲಿಸಿದರು.*ಗ್ರಾಮದ ಜನ ಆತಂಕದಲ್ಲಿದ್ದೂ, ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಅನ್ನು ಕೂಡಲೇ ಕೆಡವಿ ಅಭಿವೃದ್ಧಿಗೆ ಒತ್ತು ಕೊಡಲು ಶಾಸಕರಲ್ಲಿ ಮನವಿ ಮಾಡಿಕೊಂಡರು.*
*ಶಾಸಕರು ಕೂಡಲೇ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು*
ನಿನ್ನೇ ದಿನ *ಕೆ.ಇಬಿ ಅಧಿಕಾರಿಗಳೊಂದಿಗೆ ಕ್ಷೇತ್ರದ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಗಂಭೀರವಾಗಿ ತೆಗೆದುಕೊಂಡು ಚರ್ಚಿಸಿರುವೆ. ನಿಮ್ಮ ಊರಿನಲ್ಲಿ ನೇತು ಬಿದ್ದ ವಿದ್ಯುತ್ ತಂತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದೂ ಗ್ರಾಮಸ್ಥರನ್ನು ಶಾಸಕರು ಎಚ್ಚರಿಸಿದರು*. ಶಿಥಿಲೀಕರಣ ಗೊಂಡ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಒತ್ತುಕೊಡುವೆ. ಬಸ್ಸಿನ ಸಮಸ್ಯೆಯನ್ನು ಬಗೆಹರಿಸುವೆ ಎಂದರು. ಈ ವೇಳೆ ಗ್ರಾ. ಪಂ. ಸದಸ್ಯರಾದ ನಿಂಗಪ್ಪ, ಬಸವರಾಜ ಗೌಡ, ಓಬಯ್ಯ, ಮುಖಂಡರಾದ ಹೊನ್ನೂರು ಸ್ವಾಮಿ, ಕೃಷ್ಣಪ್ಪ, ಚೆನ್ನಪ್ಪ, ಬೆಳ್ಳಗಟ್ಟ ಬಸವರಾಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ..
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030