ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ . ಶ್ರೀನಿವಾಸ್ ಎನ್. ಟಿ. ಅವರ ಹುಟ್ಟು ಹಬ್ಬದ ಅಂಗವಾಗಿ* ದಿ; 27-08-24 ರಂದು ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು – ಸಮಾಜ ಸೇವಕರಾದ ತಮ್ಮಣ್ಣ ಎನ್. ಟಿ. ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ಉದಯ ಜನ್ನು ಜಯರಾಮ್ ಬಸಣ್ಣ ಸಾರ್ ಲಾಯರ್ ದುರುಗೇಶ್ ವಿರಭದ್ರಪ್ಪ ಮತ್ತು ಕಾಂಗ್ರೆಸ್ ಪಕ್ಷದ ವಿವಿಧ ಮುಖಂಡರು ಸೇರಿ ಸರ್ಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆ ಹಾಗೂ ಪುನಶ್ಚೇತನ ರುದ್ರಾಶ್ರಮಕ್ಕೆ ಭೇಟಿ ನೀಡಿ ವೃದ್ಧರಿಗೆ, ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್, ವಿತರಿಸಿ ಸರಳ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದರು. ಅಭಿವೃದ್ಧಿ ಪಥದ ನಿಟ್ಟಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಂವಿಧಾನ ಹಾದಿಯಲ್ಲಿ ಮುನ್ನಡೆಯುತ್ತಿರುವ ಮಾನ್ಯಶಾಸಕರ ತತ್ವ ಮತ್ತು ಸಂದೇಶವನ್ನು ಒಂದು ಮೌಲ್ಯವನ್ನಾಗಿಸಿಕೊಂಡು ಜೀವಪರ ಮತ್ತು ಮನುಷ್ಯಪರ ಕಾಳಜಿಯನ್ನು ಈ ಮೂಲಕ ವ್ಯಕ್ತಪಡಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030