ಕೂಡ್ಲಿಗಿ:ಭಾರೀ ಸದ್ಧು ಮಾಡುವ ವಿದ್ಯುತ್ ಪರಿವರ್ಥಕ ಬದಲಿಸಿ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಅಮರ ದೇವರ ಗುಡ್ಡದ ತಾಂಡ ಬಳಿ ಇರುವ, ಕೆಕೆ ಹಟ್ಟಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಿರುವ. ವಿದ್ಯುತ್ ಪರಿವರ್ಥಕ ಭಾರೀ ಸದ್ಧು ಮಾಡುತ್ತಿದ್ದು, ನೆರೆ ಹೊರೆಯ ವಾಸಿಗಳು ತುಂಬಾ ಆತಂಕಗೊಂಡಿದ್ದಾರೆ. ಕಾರಣ ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಪರಿಶೀಲಿಸಿ, ಪರಿವರ್ಥಕವನ್ನು ಶೀಘ್ರವೇ ಬದಲಿಸಬೇಕೆಂದು ಗ್ರಾಮದ ಪ್ರಜ್ಞಾವಂತ ಯುವಕರು ಜೆಸ್ಕಾಂಗೆ ಒತ್ತಾಯಿಸಿದ್ದಾರೆ. ಪರಿವರ್ಥಕವು ಜನರು ವಾಸವಿರುವ ಮನೆಗಳಿಗೆ ಹತ್ತಿರವಿದ್ದು, ಭಾರೀ ಸದ್ದು ಮಾಡುತ್ತಿದೆ ರಾತ್ರಿ ಹೊತ್ತಲ್ಲಿ ನಿದ್ರೆ ಬರೋದು ದುರ್ಲಭವಾಗಿದೆ. ಯಾವ ಕ್ಷಣದಲ್ಲಿ ಯಾವುದೋ ರೀತಿಯಲ್ಲಿ ಅವಘಡ ಸಂಭವಿಸಬಹುದೋ ಏನು.!?, ಏನು ಅನಾಹುತ ಸಂಭವಿಸುವುದೋ ಏನೋ.!? ಎಂಬ ದಿಗ್ಭ್ರಮೆ. ನೆರ ಹೊರೆ ಮನೆಗಳಲ್ಲಿ ವಾಸ ವಿರುವವರಲ್ಲಿ ಹುಟ್ಟಿಹಾಕಿದೆ, ಇದರಿಂದಾಗಿ ಕಳೆದ ಹತ್ತಾರು ತಿಂಗಳಿಂದ ನೆಮ್ಮದಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ವಿದ್ಯುತ್ ಪರಿವರ್ಥಕ ಗಿಡ ಬಳ್ಳಿ ಗಳಿಂದ ಆವೃತವಾಗಿದ್ದು, ವಿದ್ಯುತ್ ಅರ್ಥಿಂಗ್ ನಂತಹ ಅನಾಹುತಕ್ಕೆ ಕಾರಣವೂ ಆಗುವ ಸಾಧ್ಯತೆ ಇದೆ. ಜೆಸ್ಕಾಂ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿದೆಯಾದರೂ, ಪ್ರಯೋಜನವಾಗಿಲ್ಲ ಈ ವರೆಗೆ ಸ್ಪಂಧನೆ ದೊರಕಿಲ್ಲ ಎಂದು ಯುವಕರು ಆರೋಪಿಸಿದ್ದಾರೆ. ಯಾವುದೇ ರೀತಿಯ ಅವಘಡ ಸಂಭವಿಸುವ ಮೊದಲೇ ಮುಂಜಾಗ್ರತೆ ಕ್ರಮವಾಗಿ, ಅತೀ ಶೀಘ್ರವೇ ಜೆಸ್ಕಾ ಅಧಿಕಾರಿ ಸ್ಥಳ ಪರಿಶೀಲಿಸಿ. ಬೇಗನೇ ವಿದ್ಯುತ್ ಪರಿವರ್ಥಕ ಬದಲಿಸಬೇಕೆಂದು, ಹಾಗೂ ಪರಿವರ್ಥಕಕ್ಕೆ ಅಂಟಿಕೊಂಡಿರುವ ಗಿಡ ಬಳ್ಳಿಗಳನ್ನು. ತೆರವುಗೊಳಿಸಬೇಕೆಂದು ಪ್ರಜ್ಞಾವಂತ ಯುವಕರು, ಜೆಸ್ಕಾಂ ಇಲಾಖೆಗೆ ಈ ಮೂಲಕ ಒತ್ತಾಯಿಸಿದ್ದಾರೆ. ನೆಮ್ಮದಿ ಹಾಳು ಮಾಡುತ್ತಿರುವ ವಿದ್ಯುತ್ ಪರಿವರ್ಥಕದಿಂದ, ಯಾವುದೇ ಅಹಿತಕರ ಅವಘಡ ಅನಾಹುತ ಸಂಬಿಸಿದ್ದಲ್ಲಿ ನೇರ ಜೆಸ್ಕಾಂ ಅದಿಕಾರಿಯೇ ಹೊಣೆ ಎಂದು ಕೋಳಿ ಪಾರಂ ಕುಮಾರ ನಾಯ್ಕ, ಶಿವಣ್ಣ, ವಡ್ಡರ ಮಲ್ಲಣ್ಣ, ಮೋಹನ ನಾಯ್ಕ, ಪಂಡಿತ ನಾಯ್ಕ, ಶಿವುಕುಮಾರ ಈ ಮೂಲಕ ಇಲಾಖೆಗೆ ಎಚ್ಚರಿಸಿದ್ದಾರೆ….
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030