ವರಮಹಾಲಕ್ಷ್ಮಿ ಹಬ್ಬ ; ಒಳ್ಳೆಯ ಮನಸ್ಸುಗಳು, ಒಳ್ಳೆಯ ಆರೋಗ್ಯಕ್ಕೆ ಸಾಕ್ಷಿಯಾಗುತ್ತವೆ. ಶಾಸಕ- ಡಾ. ಶ್ರೀನಿವಾಸ್. ಎನ್. ಟಿ.
ಪಂಚ ಪೀಠಗಳಲ್ಲಿ ಒಂದಾಗಿರುವ ಉಜ್ಜಿನಿ ಸದ್ಧರ್ಮ ಪೀಠಕ್ಕೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 16-08-24 ರಂದು ಭೇಟಿ ನೀಡಿ ಶ್ರೀ ಮರುಳ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಹಬ್ಬದಲ್ಲಿ ಮುತ್ತೈದರಿಗೆ ಉಡಿ ತುಂಬಿ ಮಾತನಾಡಿದರು.
ಹಿಂದಿನ ಕಾಲದ ಗ್ರಾಮೀಣ ಪ್ರದೇಶಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಭಾವ ಕಂಡುಬರುತ್ತಿರಲಿಲ್ಲ. ದೊಡ್ಡ ನಗರಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ವಾತವರಣ ಇತ್ತು. ಇಂದು ಇದರ ಪ್ರಭಾವ ದಟ್ಟವಾಗಿ ಹಬ್ಬಿದೆ. ಜಗದ್ಗುರುಗಳ ಸನ್ನಿಧಿಯಲ್ಲಿ ಸಾವಿರಾರು ತಾಯಿಯರು ಉಡಿ ತುಂಬಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವಂತದ್ದು ಶ್ಲಾಘನೀಯವಾದದ್ದು . ಶ್ರಾವಣ ಮಾಸದಲ್ಲಿ ಭಕ್ತಿಯಿಂದ ನಡೆಯುವ “ಸಜ್ಜನರ ಸಂಘ, ಒಳ್ಳೆಯ ಮನಸ್ಸುಗಳು, ಒಳ್ಳೆಯ ಆರೋಗ್ಯಕ್ಕೆ ಸಾಕ್ಷಿಯಾಗುತ್ತವೆ.”ಎಂದರು. ನಾವು ಮಾನಸಿಕವಾಗಿ ನಮ್ಮ ಇತಿ ಮಿತಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದೂ ಹೇಳಿದರು. ನನ್ನ ತಾಯಿ ನನ್ನನ್ನೂ ಶ್ರಾವಣ ಮಾಸದಲ್ಲಿ ಜನ್ಮ ತಾಳಿದ್ದೀರಿ ಎಂದೂ ಹೇಳುತ್ತಿರುವುದು ಸಂತಸ ತಂದಿದೆ ಎಂದರು. ಸಭೆಯಲ್ಲಿ ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030