ಕ್ರೀಡೆಗೆ ಪ್ರೋತ್ಸಾಹ ; ಯುವಕರು ದೇಶದ ಭವಿಷ್ಯತ್ತಿನ ಪ್ರಜೆಗಳಾಗಿ ಬೆಳೆಯಬೇಕು – ಶಾಸಕ ಡಾ. ಶ್ರೀನಿವಾಸ್. ಎನ್.ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದಲ್ಲಿ “ಪ್ರಪ್ರಥಮ ಜಿಲ್ಲಾ ಸ್ಟಂಪರ್ ಬಾಲ್ ಟೂರ್ನಿಮೆಂಟ್” ಅನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರಿಗೆ ವಿಷಯ ತಿಳಿದ ನಂತರ ದಿ.11-08-24.ರಂದು ಕ್ರೀಡೆಗೆ ಪ್ರೋತ್ಸಾಹಿಸಿದರು. ಶಾಸಕರು ಯುವಕರಿಗೆ ಕಿವಿ ಮಾತು ಹೇಳುತ್ತಾ, ಕರ್ನಾಟಕ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಯುವಕರು ಒಳ್ಳೆಯ ಸಂಸ್ಕಾರವಂತರಾಗಿ ದೇಶದ ಭವಿಷ್ಯತ್ತಿನ ಪ್ರಜೆಗಳಾಗಿ ಬೆಳೆಯಬೇಕು” ಎಂದರು. ಶಾಸಕರ ಪರ ಆಪ್ತ ಬಳಗದ ಸದಸ್ಯರಾಗಿ ಡಾ. ಸಿದ್ದೇಶ ಕಾತ್ರಿಕೆಹಟ್ಟಿ ಅವರು ಕ್ರೀಡಾಪಟುಗಳು ಸಂತಸದ ಕ್ಷಣಗಳಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಶ್ರೀ ಬುಡ್ಡಾ ರೆಡ್ಡಿ, ಆರ್. ವಿ. ತಿಪ್ಪೇಸ್ವಾಮಿ, ಮಾಜಿ ತಾ.ಪಂ. ಸದಸ್ಯರಾದ ಬೋಸಣ್ಣ ಕುರಿಹಟ್ಟಿ, ಚಂದ್ರಣ್ಣ ಮಾಡ್ಲನಾಯಕನಹಳ್ಳಿ ಗೊಲ್ಲರಹಟ್ಟಿ, ವಿವಿಧ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು…
ವರದಿ. ಎಮ್. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030