ಇತ್ತೀಚಿಗೆ ಕಕ್ಕುಪ್ಪಿ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿ ಬಾಳೆ ಬೆಳೆ ಮತ್ತು ಇನ್ನಿತರ ಬೆಳೆಗಳನ್ನು ಸಂಪೂರ್ಣ ತಿಂದು ಹಾಳು ಮಾಡುತ್ತಿದ್ದು ಕ್ಯೆಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಕಕ್ಕುಪ್ಪಿ ಗ್ರಾಮ ತಾಲ್ಲೂಕಿನಲ್ಲಿಯೇ ಬೆಟ್ಟ ಮರ ಗಿಡ ಗಳಿಂದ ಕೂಡಿದ್ದು ಮಳೆಯ ಕೊರತೆ ಕೂಡ ಕಡಿಮೆ ಯಾವಾಗಲೂ ಕಕ್ಕುಪ್ಪಿ ರೈತರಿಗೆ ಬೋರ್ ವೆಲ್ ಕೂಡ ನಿರಂತರ ನೀರು ಇದ್ದೆ ಇದೆ ಇದಕ್ಕೆ ಕಾರಣ ಹೆಚ್ಚು ಜನ ತೋಟ ಗಾರಿಕೆ ಮತ್ತು ವಿಳೆ ಎಲೆ ತೋಟಗಳಿಂದ ಕೂಡಿದೆ ಆದರೆ ಇತ್ತೀಚಿಗೆ ಕೋತಿಗಳು ಲಗ್ಗೆ ಇಟ್ಟಿದ್ದು ಇಡೀ ತೋಟಗಳನ್ನು ಹಾಳು ಮಾಡುತ್ತಿವೆ ಬಾಳೆ ಗೊನೆ ಇನ್ನೇನು ಬಲಿಯಲು ಬರಬೇಕು ಎನ್ನುವಷ್ಟರಲ್ಲಿ ಇಡೀ ತೋಟ ಬಾಳೆ ಗೊನೆಯನ್ನು ಕೋತಿಗಳು ತಿಂದು ಮುಗಿಸುತ್ತಿವೆ ಇದರಿಂದ ಕಂಗೆಟ್ಟ ರೈತರು ಅರಣ್ಯ ಇಲಾಖೆ ಇವುಗಳನ್ನು ಹಿಡಿದು ಬೇರೆ ಕಡೆ ಸಾಗಿಸಲು ಒತ್ತಾಯಿಸುತ್ತಿದ್ದಾರೆ.
ಸುಮಾರು ಬೆಳೆ ಹಾಳಾಗಿದ್ದು ಉಳಿಸಿ ಕೊಳ್ಳಲು ಹರಸಾಹಾಸ ಪಡುತ್ತಿದ್ದು ಕೋತಿಗಳನ್ನು ನಿಯಂತ್ರಿಸುವ ಸಲುವಾಗಿ ಏನೇನೋ ಸರ್ಕಸ್ ಮಾಡಿದರು ಪ್ರಯೋಜನ ಆಗುತ್ತಿಲ್ಲ ಆದ್ದರಿಂದ ಸಂಭಂದ ಪಟ್ಟ ಆರಣ್ಣ್ಯ್ ಇಲಾಖೆ ಇದಕ್ಕೊಂದು ಪರಿಹಾರ ಕಲ್ಪಿಸಿ ರೈತರನ್ನು ಉಳಿಸಿ ಎಂದು ಮನವಿ ಮಾಡುತ್ತಿದ್ದಾರೆ ಎಂ ಭೋಜರಾಜಾ ಸಿದ್ದಪ್ಪ ಸುರೇಶ ವಿರೇಶ್ ಇನ್ನು ಅನೇಕ ರೈತರ ಫಸಲು ಸಂಪೂರ್ಣ ಹಾಳು ಮಾಡಿರುವ ಕೋತಿಗಳು ಇದಕ್ಕ್ ಮುಕ್ತಿ ಎಂದು ಎಂಬುದು ಗೊತ್ತಾಗುತ್ತಿಲ್ಲ ಇದಕ್ಕೆ ಸಂಬಂಧ ಪಟ್ಟವರು ಬಂದು ಪರಿಶೀಲಿಸಿ ನಮಗೆ ಪರಿಹಾರ ಕೊಡಲಿ ಎಂದು ಕಕ್ಕುಪ್ಪಿ ಅನೇಕ ಬೆಳೆ ಕಳೆದು ಕೊಂಡ ರೈತರು ಆಗ್ರಹಿಸುತ್ತಿದ್ದಾರೆ..
ವರದಿ. ಎಮ್, ಬಸವರಾಜ್. ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030