ಕೂಡ್ಲಿಗಿ ಪಟ್ಟಣವನ್ನು ಶಿಕ್ಷಣ, ಆರೋಗ್ಯ ಮತ್ತು ವಾಣಿಜ್ಯ ನಗರವನ್ನಾಗಿ ಕಟ್ಟಲು ಪ್ರಯತ್ನಿಸೋಣ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಪಟ್ಟಣ ಪಂಚಾಯತಿಯ ಆಡಳಿತ ಅಧಿಕಾರಿಗಳಾದ ಅಸಿಸ್ಟೆಂಟ್ ಕಮಿಷನರ್ ಶ್ರೀ ವಿವೇಕಾನಂದ ಅವರು ಹಾಗೂ ಪಟ್ಟಣ ಪಂಚಾಯತಿ ಸದಸ್ಯರೊಂದಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿನಾಂಕ 06-08- 24 ರಂದು ಸಭೆ ನಡೆಸಿ ಅಭಿವೃದ್ಧಿ ಒತ್ತು ಕೊಡಲು ಸೂಚಿಸಿದರು. ಕರ್ನಾಟಕ ಘನ ಸರ್ಕಾರದಲ್ಲಿ ನಮ್ಮ ಪಟ್ಟಣದ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸಲು ವಿವಿಧ ಅನುದಾನಗಳನ್ನು ತರಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳು ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ವಾಡ್೯ಗಳ ಕುಂದುಕೊರತೆಗಳನ್ನು ಆಲಿಸಿ ಅಭಿವೃದ್ಧಿ ಪಡಿಸಲು ಶ್ರಮಿಸಬೇಕು. ನಮ್ಮ ಕೂಡ್ಲಿಗಿ ಪಟ್ಟಣವನ್ನು ಇಪ್ಪತ್ತು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ವಾಣಿಜ್ಯ ನಗರವನ್ನಾಗಿ ನಿರ್ಮಿಸುವ ಕಡೆಗೆ ನಾವು ಪ್ರತ್ನಿಸೋಣ ಎಂದರು. ಪಟ್ಟಣ ಪಂಚಾಯತಿ ಸದಸ್ಯರ ಬಾಕಿ ಉಳಿದ ವಿವಿಧ ಕಾಮಗಾರಿಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದೂ ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ವಿವಿಧ ಸದಸ್ಯರು ಮತ್ತು ಅಧಿಕಾರಿಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…
ವರದಿ.ಎಮ್. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030